Advertisement

ಯುವತಿಗೆ ಪ್ರೇಮ ನಿವೇದನೆ ಮಾಡಿದ್ದಕ್ಕೆ ನಾಲ್ವರರಿಂದ ಚಿಂದಿ ಆಯುವ ಬಾಲಕನ ಹತ್ಯೆ

12:38 PM Jul 17, 2022 | Team Udayavani |

ಬೆಂಗಳೂರು: ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಬಾಲಕನನ್ನು ನಾಲ್ವರು ಸೇರಿ ಕೊಲೆಗೈದಿರುವ ಘಟನೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬನಶಂಕರಿ ನಿವಾಸಿ ಪ್ರಜ್ವಲ್‌ (17) ಕೊಲೆಯಾದವ. ಈ ಸಂಬಂಧ ನಾಗೇಂದ್ರ ಸೇರಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬನಶಂಕರಿಯಲ್ಲಿ ಹಳೇ ಪೇಪರ್‌ ಆಯುವ ಕೆಲಸ ಮಾಡುತ್ತಿದ್ದ ಪ್ರಜ್ವಲ್‌ ದೂರದ ಸಂಬಂಧಿ ನಾಗೇಂದ್ರ ಅವರ ಸಹೋದರನ ಪುತ್ರಿಗೆ ಕರೆ ಮಾಡಿ, ಪ್ರೀತಿಸುವಂತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ.

ಇದನ್ನೂ ಓದಿ: ವಿವಾಹಿತೆಯ ಹಿಂದೆ ಬಿದ್ದ ಮೆಕ್ಯಾನಿಕ್‌ ಹುಡುಗನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದ ದಂಪತಿ

ಈ ವಿಚಾರವನ್ನು ಯುವತಿ ತನ್ನ ಪೋಷಕರಿಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ನಾಗೇಂದ್ರ ಮತ್ತು ಆತನ ನಾಲ್ವರು ಸಹಚರರು, ಶುಕ್ರವಾರ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ನಿರ್ಜನ ಪ್ರದೇಶಕ್ಕೆ ಪ್ರಜ್ವಲ್‌ನನ್ನು ಕರೆಸಿಕೊಂಡಿದ್ದಾರೆ.

ಬಳಿಕ ಎಚ್ಚರಿಕೆ ನೀಡುವ ಭರದಲ್ಲಿ ದೊಣ್ಣೆಯಿಂದ ಪ್ರಜ್ವಲ್‌ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಬಾಲಕನನ್ನು ಆರೋಪಿಗಳೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ಬೈಯಪ್ಪನಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next