Advertisement

ಮಳೆನೀರು ಕೊಯ್ಲು ಘಟಕ ಉದ್ಘಾಟನೆ

11:31 PM Jul 04, 2019 | Team Udayavani |

ಬ್ರಹ್ಮಾವರ: ಉಡುಪಿ ಜಿ.ಪಂ. ಹಾಗೂ ಕಲ್ಯಾಣಪುರ ಮಿಲಾಗ್ರಿಸ್‌ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ 2019 ಹಾಗೂ ಜಲಾಮೃತ ವರ್ಷ-2019ರ ಪ್ರಯುಕ್ತ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಮಳೆನೀರು ಕೊಯ್ಲು ಘಟಕ ಉದ್ಘಾಟನೆಗೊಂಡಿತು.

Advertisement

ಜಿ.ಪಂ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಂಧು ಬಿ. ರೂಪೇಶ್‌ ಅವರು ನೀರು ತಡೆ ಹಿಡಿಯುವ ಘಟಕಕ್ಕೆ ಚಾಲನೆ ನೀಡಿದರು.

ಜಿ.ಪಂ. ಮುಖ್ಯಯೋಜನಾ ಅಧಿಕಾರಿ ಶ್ರೀನಿವಾಸ್‌ ರಾವ್‌ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಮಾಹಿತಿ ಪತ್ರವನ್ನು ಬಿಡುಗೊಡೆಗೊಳಿಸಿದರು.

ಶಾಲಾ ಸಂಚಾಲಕ ರೆ| ಫಾ| ಡಾ|ಲಾರೆನ್ಸ್‌ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯ ರೆ|ಫಾ| ಲ್ಯಾನ್ಸಿ ಫೆರ್ನಾಂಡಿಸ್‌ ಎಸ್‌.ಜೆ., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯೆ ವೀರಾ ಡಿ’ಸಿಲ್ವಾ ಉಪಸ್ಥಿತರಿದ್ದರು.ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ತರಬೇತುದಾರ ಜೋಸೆಫ್‌ ರೆಬೆಲ್ಲೋ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರೌಢಶಾಲಾ ಶಿಕ್ಷಕ ಪ್ರಶಾಂತ್‌ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next