Advertisement

Mantralayam ಶ್ರೀಮೂಲ ರಾಮ ನಿಲಯ ಉದ್ಘಾಟನೆ

11:33 PM Aug 21, 2023 | Team Udayavani |

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಭಕ್ತರಾದ ಸೋಮಶೇಖರ ಅವರು ನಿರ್ಮಿಸಿ ಕೊಟ್ಟ 100 ಕೊಠಡಿಗಳ ಶ್ರೀಮೂಲ ರಾಮ ನಿಲಯವನ್ನು ರಾಯರ 352ನೇ ಆರಾಧನ ಪ್ರಯುಕ್ತ ಶ್ರೀಮಠದ ಪೀಠಾಧಿ ಪತಿ ಶ್ರೀಸುಬುಧೇಂದ್ರ ತೀರ್ಥರು ಸೋಮವಾರ ಉದ್ಘಾಟಿಸಿದರು.

Advertisement

ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ಬಹುಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯ ನಿರ್ಮಿಸಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆರಾಧನ ಈಗಲೇ ಉದ್ಘಾಟಿಸಲಾಗಿದೆ ಎಂದರು. ಕಟ್ಟಡದ ದಾನಿಗಳಾದ ಸೋಮಶೇಖರ ಹಾಗೂ ಕುಟುಂಬ ಸದಸ್ಯರು ಶ್ರೀಗಳಿಗೆ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next