Advertisement

ವಿಜಯಾ ಕರದಂಟುವಿನ ನೂತನ ಮಳಿಗೆ ಉದ್ಘಾಟನೆ

12:42 PM Oct 01, 2018 | Team Udayavani |

ಬೆಂಗಳೂರು: ವಿಜಯನಗರದ ರಾಮಮಂದಿರ ಬಳಿ ಭಾನುವಾರ ಅಮೀನಗಡ ವಿಜಯಾ ಕರದಂಟು ಮಾರಾಟದ ನೂತನ ಮಳಿಗೆಯನ್ನು ಶಾಸಕ ವಿ. ಸೋಮಣ್ಣ ಅವರು ಉದ್ಘಾಟಿಸಿದರು. 

Advertisement

ಈ ವೇಳೆ ಮಾತನಾಡಿದ ಅವರು, ಕರದಂಟು ಬರೀ ಸಿಹಿ ಮಾತ್ರವಲ್ಲ. ಆರೋಗ್ಯಕರವಾದ ಪೌಷ್ಠಿಂಕ ಅಂಶಗಳನ್ನು ಕೂಡ ಹೊಂದಿದೆ. ಶುದ್ಧ ಸಾವಯವ ಬೆಲ್ಲದಿಂದ ತಯಾರು ಮಾಡಿರುವ ಕರದಂಟು ಸದೃಢ ಆರೋಗ್ಯಕ್ಕೆ ಒಳ್ಳೆಯ ಸಿಹಿ ತಿಂಡಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಸುಪ್ರಸಿದ್ಧವಾಗಿರುವ ಅಮೀನಗಡ ವಿಜಯಾ ಕರದಂಟು ಈಗ ಬೆಂಗಳೂರಿನಲ್ಲೂ ಸಿಗುತ್ತಿರುವುದು ಸಂತಸದ ವಿಚಾರ.

ಪಾರಂಪರಿಕ ಶುಚಿ ರುಚಿ ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡಿರುವ ಅಮೀನಗಡ ವಿಜಯಾ ಕರದಂಟು ಗ್ರಾಹಕರ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಂಡು ಹೋಗಲಿ ಎಂದು ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಪ್ರೇಮ್, ಹಿರಿಯ ನಟ ರಮೇಶ್‌ ಭಟ್, ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next