Advertisement

ಅಸಮರ್ಪಕ ಕಾಮಗಾರಿ: ಅಪಾಯಕಾರಿ ಹೊಂಡ

01:00 AM Mar 14, 2019 | Team Udayavani |

ಅಜೆಕಾರು: ಮರ್ಣೆ ಪಂಚಾಯತ್‌ ವ್ಯಾಪ್ತಿಯ ಮುದೆಲ್ಕಡಿ ಎಂಬಲ್ಲಿ ರಸ್ತೆ ತಿರುವಿನಲ್ಲಿ ರಸ್ತೆಗೆ ಹೊಂದಿಕೊಂಡಂತೆ ಚರಂಡಿ ನಿರ್ಮಿಸಲಾಗಿದ್ದು ಇದು ಅಪಾಯಕಾರಿ ಹೊಂಡವಾಗಿ ನಿರ್ಮಾಣವಾಗಿದೆ.

Advertisement

ಕಳೆದ ವರ್ಷ ಅಜೆಕಾರು ಮಿಯಾರು ಸಂಪರ್ಕಿಸುವ ರಸ್ತೆ ವಿಸ್ತರಣೆಗೊಳಿಸಿ  ಮರು ಡಾಮರುಗೊಳಿಸಲಾಗಿತ್ತು. ಆದರೆ ಮುದೆಲ್ಕಡಿ ಬಳಿಯ ಅಪಾಯಕಾರಿ ತಿರುವಿನಲ್ಲಿ ರಸ್ತೆಗೆ ಹೊಂದಿಕೊಂಡಂತೆ ಚರಂಡಿ  ನಿರ್ಮಾಣ ಮಾಡಿರುವುದರಿಂದ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

ಮಳೆಗಾಲದಲ್ಲಿ ಈ ಚರಂಡಿಯ ಮೂಲಕ ಭಾರೀ  ನೀರು ಹರಿಯುವುದರಿಂದ ರಸ್ತೆ ಕುಸಿಯುವ ಭೀತಿ ಎದುರಾಗಿದೆ.
ಈಗಾಗಲೇ ರಸ್ತೆಯ ಅಂಚು ಕುಸಿದಿದ್ದು ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸುವ ಮೊದಲು ಸೂಕ್ತ ವ್ಯವಸ್ಥೆಯಾಗಬೇಕು  ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next