Advertisement

ಸತ್ಯ, ನಿಷ್ಠೆಯ ಜೀವನವೇ ದೈವಭಕ್ತಿ: ವಸಂತ ಪೈ

04:36 PM Mar 06, 2017 | |

ಬದಿಯಡ್ಕ: ಮನುಷ್ಯನಾದವನು ಪ್ರಾಮಾಣಿಕ ವಾಗಿ ಸತ್ಯ ನ್ಯಾಯ ನಿಷ್ಠೆಯಿಂದ ಜೀವನ ಸಾಗಿಸಿದರೆ ಅದೇ ದೇವರ ಭಕ್ತಿ ಎಂದು ವಸಂತ ಪೈ ಅಭಿಪ್ರಾಯಪಟ್ಟರು.

Advertisement

ಗ್ರಾಮಾಭಿವೃದ್ಧಿ ಯೋಜನೆ ಕುಂಬಳೆ ಕಾಸರಗೋಡು ತಾಲೂಕು ಪ್ರಗತಿಬಂಧು ಸ್ವ-ಸಹಾಯ ಸಂಘಗಳು ಬದಿಯಡ್ಕ ವಲಯ ಹಾಗೂ ಸೌರ್ಪಣಿಕ ನವಜೀವನ ಸಮಿತಿ ಬದಿಯಡ್ಕ ಇವುಗಳ ಸಂಯುಕ್ತಾಶ್ರಯದಲ್ಲಿ ಕೆಡೆಂಜಿ ಮಹಾವಿಷ್ಣು ಕ್ಷೇತ್ರದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಕೆ.ಎನ್‌.ಕೃಷ್ಣ ಭಟ್‌  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಧ.ಗ್ರಾ. ಯೋಜನೆಯ ಜಿಲ್ಲಾ ಯೋಜನಾ ಧಿಕಾರಿ ಚೇತನ, ಎಸ್‌.ಎನ್‌ .ಮಯ್ಯ, ಬಾಲಕೃಷ್ಣ ಶೆಟ್ಟಿ, ಶ್ಯಾಮ್‌ ಆಳ್ವ ಕಾಡಾರ್‌ ಮುಂತಾದವರು ಮಾತಾನಾಡಿದರು. ಜಲಜಾಕ್ಷಿ ಸ್ವಾಗತಿಸಿದರು. ಕುಸುಮ ವರದಿ ವಾಚಿಸಿದರು, ದನಂಜಯ ಕಾರ್ಯಕ್ರಮ ನಿರೂಪಿಸಿದರು. ರಘರಾಮ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next