ಮಾಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಭೂಮಿತಾಯಿ ಯಾವತ್ತೂ ಅನ್ನದಾತನ ಕೈಬಿಡುವುದಿಲ್ಲ ಎಂಬುದನ್ನು ಸಾರಿ ಹೇಳಿದಂತಿತ್ತು. ಕೊಯ್ಲಿಲಿಗೇ ಸಿಗದರಾಗಿ ಬೆಳೆಯನ್ನು ನೋಡುತ್ತಾ ನಿರಾಸೆಗೊಳಗಾದ ರೈತರ ತಲೆ ನೇವರಿಸಿ ಸಾಂತ್ವನ ಹೇಳಿದ್ದು ಈ ಭೂಮಿತಾಯಿ. “ಇದೋ, ನೀನು ಭೂಮಿಗೆ ಹಾಕಿದ ಬಂಡವಾಳವನ್ನು ವಾಪಸ್ಸು ಕೊಡುತ್ತಿದ್ದೇನೆ’ ಎನ್ನುವಂತಿತ್ತು ಆ ಔಡಲ ಬೆಳೆ.
Advertisement
ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮಳೆಯಾಶ್ರಿತವಾಗಿ ರಾಗಿಯೇ ಮುಖ್ಯ ಬೆಳೆ. ಪ್ರತೀ ಹತ್ತು ಸಾಲು ರಾಗಿಗೆ ಒಂದು ಸಾಲು ಅಕ್ಕಡಿ ಬೆಳೆ ಬಿತ್ತುವುದು ವಾಡಿಕೆ. ಅಕ್ಕಡಿ ಸಾಲಿನಲ್ಲಿ ಜೋಳ, ಹರಳು. ಅಲಸಂದೆ, ಸಾಸಿವೆ, ಹುಚ್ಚೆಳ್ಳು ಮುಂತಾದ ನವಧಾನ್ಯಗಳು ಸೇರಿಕೊಂಡಿವೆ. ಈ ಸಂಪ್ರದಾಯ ತಲೆಮಾರಿನಿಂದ ರೂಢಿಸಿಕೊಂಡು ಬಂದಿರುವಂತಾದ್ದು. ಇತ್ತೀಚೆಗೆ ರೈತರು ಈ ಅಕ್ಕಡಿ ಬೆಳೆಯ ಸಾಲನ್ನು ಕೈ ಬಿಡುತ್ತಿದ್ದಾರೆ. ಏಕಬೆಳೆ ಪದ್ಧತಿಯತ್ತ ಒಲವು ತೋರುತ್ತಿದ್ದಾರೆ. ರಾಗಿಯೊಂದೇ ಬೆಳೆದರೆ ಸಾಕೆಂಬ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಆಧುನಿಕ ರಾಗಿ ತಳಿಗಳೂ ಕೂಡಾ ಅಕ್ಕಡಿ ಸಾಲಿನಬೆಳೆಗಳ ಬೆಳವಣಿಕೆಗೆ ಆಸ್ಪದ ಕೊಡುತ್ತಿಲ್ಲವೆಂಬುದು ಕೂಡಾ ಅಷ್ಟೇ ನಿಜ. ಅಕ್ಕಡಿ ಬೆಳೆ ಬೆಳೆಯುವವರೂ ಆದ್ಯತೆ ಮೇಲೆ ಬೀಜಗಳ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುತ್ತಾರೆ. ದನಕರುಗಳಿಗೆ ಮೇವಾಗಿ ಜೋಳದ ಕಡ್ಡಿ ಬೇಕೆಂದವರು
ಜೋಳವನ್ನೇ ಹೆಚ್ಚು ಸೇರಿಸುತ್ತಾರೆ. ಅವರೇಕಾಯಿ ಜಾಸ್ತಿ ತಿನ್ನಬೇಕೆಂದವರು ಒಂದು ಹಿಡಿ ಜಾಸ್ತಿ ಬಿತ್ತುವುದಿದೆ.
ಗಿಡಗಳಿಗೆ ತದನಂತರ ಅದೆಲ್ಲಿಂದ ಶಕ್ತಿ ಬರುತ್ತೋ ಗೊತ್ತಾಗುವುದಿಲ್ಲ. ಗಾಳಿ ಬೆಳಕು ಸಿಕ್ಕಿದರೆ ಸಾಕೆಂದು ಕಾಣಿಸುತ್ತದೆ. ನೋಡುನೋಡುತ್ತಿದ್ದಂತೆ ಆಳೆತ್ತರ ಬೆಳೆದು ನಿಂತಿರುತ್ತವೆ. ಪಕ್ಕದಲ್ಲೇ ಬೆಳೆಯುತ್ತಿರುವ ಅವರೇ ಗಿಡಗಳ ಹಂಬು ಹಬ್ಬಲು ಗೂಟವಾಗಿ ಸೇವೆ ಸಲ್ಲಿಸುತ್ತವೆ. ಇನ್ನೊಂದೆಡೆ ಅವರೇಕಾಯಿಗೆ ಬೀಳುವ ಹುಳುಗಳ ಭಕ್ಷಣೆಗಾಗಿ ಹಾತೊರೆಯುವ ಪಕ್ಷಿಗಳು ಕೂತುಕೊಳ್ಳಲು ಇದೇ ಹರಳಿನ ಗಿಡಗಳು ಆಶ್ರಯ ನೀಡುತ್ತವೆ. ಹೊಲವೆಲ್ಲಾ ಖಾಲಿಯಾಯಿತೆನ್ನುವಾಗ
ಕೊಂಬೆಯೊಡೆದು ಬೆಳೆದು ಹೂ ಬಿಟ್ಟು ಕಾಯಿ ಕಟ್ಟುತ್ತದೆ. ಯಾಕೆಂದರೆ ದನಕರುಗಳು ಓಡಿ ಬಂದು ಮೇಯ್ದು ಬಿಡುವ ಭಯ ರೈತರಿಗಿಲ್ಲ. ಹರಳು ಗಿಡದ ಹಸಿರು ದನಕರುಗಳನ್ನು ಅಷ್ಟಾಗಿ ಸೆಳೆಯುವದಿಲ್ಲ. ವಾರ್ಧಾ ಮಳೆಯ ಪ್ರಭಾವ ಡಿಸೆಂಬರ್ ತಿಂಗಳಿನಲ್ಲಿ ಸುರಿದ ವಾರ್ಧಾ ಮಳೆಯೇ ಔಡಲ ಬೆಳೆಯ ಬೆಳವಣಿಗೆ ಕಾರಣ. ಅಪಾರ ಬರನಿರೋಧಕ ಶಕ್ತಿ ಇರುವ ಈ ಬೆಳೆಗೆ ಸಿಕ್ಕಿದ ಸ್ವಲ್ಪ ತೇವಾಂಶವನ್ನು ಬಳಸಿಕೊಂಡು ಪುನಶ್ಚೇತನಗೊಳ್ಳುವ ತಾಕತ್ತೂ ಇದೆ ಎಂದು ಸಾಭೀತುಪಡಿಸಿತು. ಹೊಲವೆಲ್ಲಾ ಒಣಗಿ ಹೋಗುವ ಸಮಯದಲ್ಲಿ ಹಸಿರು ತುಂಬಿ ಬಂತು.
Related Articles
Advertisement
ನಮ್ಮ ಹಿರಿಯರ ಮಿಶ್ರ ಬೆಳೆ ಬೆಳೆಯುವ ಸಂಪ್ರದಾಯ ನಿಜಕ್ಕೂ ಮೆಚ್ಚುವಂತದ್ದು. ಮೂರು ತಿಂಗಳಿನ ರಾಗಿ ಬೆಳೆಯೊಂದಿಗೆ ಆರು ತಿಂಗಳ ಔಡಲವನ್ನೂ ಜೋಡಿಸಿರುವುದರ ಹಿಂದೆ ಒಂದು ಸರಳ ಲೆಕ್ಕಾಚಾರವಿದೆ. ಒಂದು ಮಳೆ ಕೈಕೊಟ್ಟರೆ ಒಂದು ಬೆಳೆ ಕೈ ತಪ್ಪಬಹುದು. ಹಾಗೆಯೇ ಯಾವುದಾದರೂ ಒಂದು ಮಳೆ ಬಂದರೆ ಒಂದು ಬೆಳೆಯಾದರೂ ಕೈಗೆ ಸಿಕ್ಕೀತು. ಭೂಮಿಗೆ ಹಾಕಿದ ಬಂಡವಾಳ ಯಾವತ್ತೂ ನಷ್ಟವಾಗುವುದಿಲ್ಲ. ನಮ್ಮೊಂದಿಗೆ ಜೂಜಾಡುವ ಮುಂಗಾರು ಮಳೆಗೂ ಸಡ್ಡು ಹೊಡೆದು ಅವರು ಬದುಕಿದ್ದು ಹೀಗೇ ತಾನೇ ?
– ಗಣಪತಿಭಟ್, ಹಾರೋಹಳ್ಳಿ