Advertisement

ಸುಪ್ರೀಂನಲ್ಲಿ ಪಿಐಎಲ್‌, ಜಾಮೀನು ಅರ್ಜಿ ವಿಚಾರಣೆ ಬೇಡ: ಸಚಿವ ರಿಜಿಜು ಅಭಿಮತ

10:35 PM Dec 15, 2022 | Team Udayavani |

ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಕ್ಷುಲ್ಲಕ ಕಾರಣಕ್ಕಾಗಿ ಸಲ್ಲಿಕೆ ಮಾಡಿರುವ ಪಿಐಎಲ್‌, ಜಾಮೀನು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರುವ ವರೆಗೆ ನ್ಯಾಯಮೂರ್ತಿಗಳ ಕೊರತೆ ಕಾಡಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಕೊಲೀಜಿಯಂ ವ್ಯವಸ್ಥೆಯ ಬದಲು ನ್ಯಾಯಾಂಗ ನೇಮಕ ಆಯೋಗ ರಚನೆ ಆಗಬೇಕು ಎಂಬ ಅಂಶವನ್ನು ಪರೋಕ್ಷವಾಗಿ ಉಲ್ಲೇಖೀಸಿದ್ದಾರೆ.

ನ್ಯಾಯಮೂರ್ತಿಗಳ ನೇಮಕದಲ್ಲಿ ಕೇಂದ್ರ ಸರ್ಕಾರಕ್ಕೆ ಸೀಮಿತ ಅಧಿಕಾರ ಇದೆ ಎಂದೂ ಕೇಂದ್ರ ಕಾನೂನು ಸಚಿವರು ಹೇಳಿಕೊಂಡರು.

ರಿಜಿಜು ಹೇಳಿಕೆ ವಿರುದ್ಧ ಪ್ರತಿಪಕ್ಷ ನಾಯಕರಾದ ಕಪಿಲ್‌ ಸಿಬಲ್‌, ಸಲ್ಮಾನ್‌ ಖುರ್ಷಿದ್‌ ಆಕ್ಷೇಪ ಮಾಡಿದ್ದಾರೆ. ಸಿಬಲ್‌ ಟ್ವೀಟ್‌ ಮಾಡಿ ಸಚಿವರಿಗೆ ಸ್ವಾತಂತ್ರ್ಯ ಎಂಬ ಪದದ ಅರ್ಥ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಆರೋಪಗಳನ್ನು ತಿರಸ್ಕರಿಸಿದ ಸಚಿವ ರಿಜಿಜು ನ್ಯಾಯಾಂಗದ ಹಿತ ದೃಷ್ಟಿಯಿಂದಲೇ ಈ ಮಾತುಗಳನ್ನಾಡಿದ್ದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next