Advertisement

ತಿಮಿಂಗಿಲದ ಅಸ್ಥಿಪಂಜರ ವಶಕ್ಕೆ

12:20 AM Aug 02, 2023 | Team Udayavani |

ಕಾಸರಗೋಡು: ಮಂಜೇಶ್ವರದ ಕಣ್ವತೀರ್ಥದ ಖಾಸಗಿ ಜಮೀನಿನ ಶೆಡ್‌ನ‌ಲ್ಲಿಟ್ಟಿದ್ದ ತಿಮಿಂಗಿಲದ ಅಸ್ಥಿಪಂಜರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಅರಣ್ಯಾಧಿಕಾರಿ ಕೆ.ಅಶ್ರಫ್‌ ಪ್ರಕಾರ ಈ ಜಮೀನು 75 ವರ್ಷದ ರಿಸ್ಕಿನ್‌ ಅವರಿಗೆ ಸೇರಿದೆ. ಇವರು ಚಿಕ್ಕಮಗಳೂರು ನಿವಾಸಿ. ಅಸ್ಥಿಪಂಜರವನ್ನು ಚೆನ್ನಾಗಿ ನಿರ್ವಹಿಸಲಾಗಿದೆ ಮತ್ತು ಕಳೆದ 15 ವರ್ಷಗಳಿಂದ ಶೆಡ್‌ನ‌ಲ್ಲಿ ಇರಿಸಲಾಗಿತ್ತು.

Advertisement

ಮೀನುಗಾರನಿಂದ ವ್ಯಕ್ತಿಯೊಬ್ಬರು ಅಸ್ಥಿಪಂಜರವನ್ನು ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. 2007ರಲ್ಲಿ ಖರೀದಿಸಿದ್ದರು ಮತ್ತು 27 ಸಾವಿರ ರೂ. ಶೆಡ್‌ ನಿರ್ಮಾಣಕ್ಕೆ ಬಳಸಿದ್ದರು. ಇದೀಗ ಅಸ್ಥಿಪಂಜರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ವನ್ಯಜೀವಿ ಸಂರಕ್ಷಣ ಕಾಯ್ದೆಯಲ್ಲಿ 16 ತಿಮಿಂಗಿಲಗಳನ್ನು ಉಲ್ಲೇಖಸಿಲಾಗಿದೆ ಎಂದು ಅಶ್ರಫ್‌ ತಿಳಿಸಿದ್ದಾರೆ. ಅಸ್ಥಿಪಂಜರದ ವಿವರವನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ವಿಶ್ಲೇಷಣೆಯ ಅಗತ್ಯವಿರುತ್ತದೆ. ಅಸ್ಥಿಪಂಜರವನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಪರೀಕ್ಷೆಯ ಫಲಿತಾಂಶದ ಅನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next