Advertisement

ಚಿನ್ನಾಭರಣ ಮಳಿಗೆಗಳಲ್ಲಿ ಭರದಿಂದ ಸಾಗಿದ ವ್ಯಾಪಾರ

10:35 AM Apr 19, 2018 | |

ಮಹಾನಗರ: ಅಕ್ಷಯ ತೃತೀಯಾ ದಿನವಾದ ಬುಧವಾರ ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ವ್ಯಾಪಾರ ಭರದಿಂದ ಸಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತುಸು ಹೆಚ್ಚೇ ವ್ಯವಹಾರ ನಡೆದಿದೆ.

Advertisement

ಅಕ್ಷಯ ತೃತೀಯಾ ದಿನದಂದು ಚಿನ್ನಾಭರಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಇದಕ್ಕನುಗುಣವಾಗಿ ತಲೆ ತಲಾಂತರದಿಂದಲೂ ಅಕ್ಷಯ ತೃತೀಯಾದಂದು ಚಿನ್ನ, ವಜ್ರಾಭರಣ ಖರೀದಿ ಮಾಡುವುದು ನಡೆಯುತ್ತಿದೆ. ಅದರಂತೆ ಬುಧವಾರ ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಜನಜಂಗುಳಿ ಹೆಚ್ಚಿತ್ತು. ಚಿನ್ನ, ವಜ್ರ, ನವರತ್ನ ಸೇರಿದಂತೆ ವಿವಿಧ ಆಭರಣಗಳನ್ನು ಖರೀದಿಸಿ ಗ್ರಾಹಕರು ಈ ದಿನವನ್ನು ಸಂಭ್ರಮಿಸಿದರು.

ನೀತಿ ಸಂಹಿತೆ ಅಡ್ಡಿಯಾಗಿಲ್ಲ
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯವಹಾರಕ್ಕೆ ತೊಡಕಾಗ ಬಹುದು ಎಂಬ ಆತಂಕ ಕೆಲವು ಚಿನ್ನಾಭರಣ ಮಳಿಗೆಗಳ ಸಿಬಂದಿಗಿತ್ತು.

ಆದರೆ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ವ್ಯವಹಾರ ನಡೆದಿದ್ದು, ಚಿನ್ನಾಭರಣ ಖರೀದಿಸುವಿಕೆಗೆ ನೀತಿ ಸಂಹಿತೆಯಿಂದ ಯಾವುದೇ ತೊಡಕಾಗಿಲ್ಲ. ಇದರಿಂದ ಗ್ರಾಹಕರು ನಿರಾಯಾಸವಾಗಿ ಚಿನ್ನಾಭರಣಗಳನ್ನು ಖರೀದಿಸಿದರೆ, ಚಿನ್ನಾಭರಣ ಮಳಿಗೆಗಳ ಮಾಲಕರಿಗೂ ವ್ಯವಹಾರಕ್ಕೆ ಸಮಸ್ಯೆ ಉಂಟಾಗಲಿಲ್ಲ.

ವಿವಿಧ ಚಿನ್ನಾಭರಣ ಮಳಿಗೆಗಳು ನಾನಾ ರೀತಿಯ ದರ ಕಡಿತ, ಉಡುಗೊರೆ, ಉಚಿತ ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಪ್ರಕಟಿಸಿ ಗ್ರಾಹಕರನ್ನು ಆಕರ್ಷಿಸಿದ್ದವು. ಇದರಿಂದ ಸಹಜವಾಗಿ ಗ್ರಾಹಕರೂ ಆಕರ್ಷಿತರಾಗಿ ಚಿನ್ನ ಖರೀದಿಯಲ್ಲಿ ತೊಡಗಿದ್ದರು.

Advertisement

ಕಳೆದ ವರ್ಷಕ್ಕಿಂತ ಈ ವರ್ಷ ತುಸು ಹೆಚ್ಚೇ ವ್ಯವಹಾರ ನಡೆದಿದೆ. ಗ್ರಾಹಕರಿಂದ ಅಕ್ಷಯ ತೃತೀಯಾ ದಿನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಎಸ್‌.ಎಲ್‌. ಶೇಟ್‌ ಜುವೆಲರ್, ಜೋಸ್‌ ಆಲುಕ್ಕಾಸ್‌, ಜೋಯ್‌ ಅಲುಕ್ಕಾಸ್‌ ಮುಂತಾದ ಮಳಿಗೆಗಳ ಸಿಬಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next