Advertisement

ಚೂರಿ ಹಿಡಿದು ಕೇರಳ ಭವನಕ್ಕೆ ನುಗ್ಗಿದವನಿಗೆ ತಡೆ; ಸಿಎಂ ಟಾರ್ಗೆಟ್‌ ?

02:56 PM Aug 04, 2018 | Team Udayavani |

ಹೊಸದಿಲ್ಲಿ: ಚೂರಿ ಹಿಡಿದು ಕೇರಳ ಭವನದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಭದ್ರತಾ ಸಿಬಂದಿಗಳು ತಡೆದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸಿಎಂ ಪಿಣರಾಯಿ ವಿಜಯನ್‌ ಅವರು ಕೇರಳ ಭವನದ ಒಳಗಿದ್ದ ವೇಳೆಯಲ್ಲೇ ಈ ಘಟನೆ ನಡೆದಿದೆ. 

Advertisement

ಚೂರಿ ಸಮೇತ ಒಳನುಗ್ಗಲು ಯತ್ನಿಸಿದವನನ್ನು ಹತ್ತಕ್ಕೂ ಹೆಚ್ಚು ಭದ್ರತಾ ಸಿಬಂದಿಗಳು ತಡೆದು ನೆಲಕ್ಕೆ ಬೀಳಿಸಿದರು. 

ಬಂಧಿತ ವ್ಯಕ್ತಿ ಮಾನಸಿಕವಾಗಿ ಸಮತೋಲನ ಕಳೆದುಕೊಂಡವನಂತೆ ಕಂಡು ಬಂದಿದ್ದು ಆತನನ್ನು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸ್‌ ಗೆ ಕರೆದೊಯ್ಯಲಾಗಿದೆ. ವಿಚಾರಣೆ ಮುಂದುವರಿದಿದೆ. 

ಜಮ್ಮುವಿನಲ್ಲಿ ಮಾಜಿ ಸಿಎಂ ಫಾರೂಕ್‌ ಅಬ್‌ದುಲ್ಲಾ ಮನೆಗೆ ದುಷ್ಕರ್ಮಿಯೊಬ್ಬ ನುಗ್ಗಲು ಯತ್ನಿಸಿ ಹತ್ಯೆಗೀಡಾದ ದಿನವೇ ಈ ಘಟನೆ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next