Advertisement

Mohan G; ಪಳನಿ ಪ್ರಸಾದದಲ್ಲಿ ನಪುಂಸಕತ್ವ ಔಷಧ ಹೇಳಿಕೆ: ನಿರ್ದೇಶಕ ಸೆರೆ

12:17 AM Sep 25, 2024 | Team Udayavani |

ಚೆನ್ನೈ: ತಮಿಳುನಾಡಿನ ಪಳನಿ ದೇವಸ್ಥಾನದ ಪಂಚಾ­ಮೃತ ಪ್ರಸಾದದಲ್ಲಿ ಪುರುಷರ ನಪುಂಸಕತ್ವಕ್ಕೆ ಕಾರಣವಾಗುವ ಔಷಧ ಬೆರೆಸಿ ಪ್ರಸಾದ ನೀಡಲಾಗುತ್ತಿತ್ತು ಎಂಬ ಹೇಳಿಕೆ ನೀಡಿದ್ದ ತಮಿಳಿನ ಖ್ಯಾತ ನಿರ್ದೇಶಕ ಮೋಹನ್‌ರನ್ನು ಮಂಗಳವಾರ ತಿರುಚ್ಚಿ ಪೊಲೀಸರು ಬಂಧಿಸಿದ್ದಾರೆ.

Advertisement

ಈ ಬಗ್ಗೆ ಬಿಜೆಪಿ ಘಟಕ ಆಕ್ಷೇಪಿಸಿದ್ದು, ನಿರ್ದೇಶಕನ ಮನೆಯವರಿಗೂ ಮಾಹಿತಿ ನೀಡದೇ, ಅಸಾಂವಿಧಾನಿಕವಾಗಿ ಮೋಹನ್‌ರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದೆ.

ಯುಟ್ಯೂಬ್‌ ಚಾನೆಲ್‌ವೊಂದರ ಸಂದರ್ಶನದಲ್ಲಿ ತಿರುಪತಿ ಲಡ್ಡು ವಿವಾದದ ಕುರಿತು ಪ್ರಶ್ನಿಸಿದಾಗ ಮೋಹನ್‌ ಮೇಲ್ಕಂಡ ಹೇಳಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next