Advertisement
ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿದ ರೈತ ಮುಖಂಡರು, ಸುಮಾರು 25 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ತಾಲೂಕಿನ ಮಾಂಜ್ರಾ ನದಿಯಿಂದ ಮೆಹಕರ ಗ್ರಾಮದ ಹತ್ತಿರ ನಿರ್ಮಿಸಲಾದ 1.00 ಟಿಎಂಸಿ ಅಡಿ ನೀರು ಎತ್ತುವ ಕಾಮಗಾರಿಗೆ ಸರ್ಕಾರ ಸ್ಪಂದಿಸಬೇಕು. ಹಿಂದಿನ ಸರ್ಕಾರದಲ್ಲಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರು ಮುತುವರ್ಜಿ ವಹಿಸಿ ಏತ ನೀರಾವರಿ ಬ್ರಿಜ್ಕಂ ಬ್ಯಾರೇಜ್ ನಿರ್ಮಿಸಿದ್ದಾರೆ. ಸದ್ಯದ ಸರ್ಕಾರ ಈ ಯೋಜನೆ ಬಾಕಿ ಉಳಿದ ಕಾಮಗಾರಿ ಪೂರ್ಣ ಗೊಳಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಣಮಂತರಾವ ಚೌಹಾಣ, ರೈತ ಮುಖಂಡರಾದ ವಿವೇಕ ಖೈಭಾಯಿ, ವಿದ್ಯಾವಾನ ಮಂಗಣೆ, ರವಿ ನೀಲಾ, ವಿಜಯಕುಮಾರ ಹೀರಾನಾಯಕ, ಅನಿಲ ಪಾಟೀಲ ವಾಂಜರಖೇಡ, ಪಾಂಡು ಕಾಂಬಳೆ, ಭಾವುಸಾಬ ಮೋರೆ, ದೇವು ಸಿಂಧೆ, ಪಾಂಡುರಂಗ ಕಾಂಬಳೆ, ಶರದ ಗಂದಗೆ, ದಿಲೀಪ ಕಲಯಾಣಕರ, ಸಂತೋಷ ಗಂದಗೆ, ವಿಶ್ವನಾಥ ಪಚಗೆ, ಮಕಬೂಲ ಪಟೇಲ, ಸುರೇಶ ಬಾವುಗೆ, ಸತೀಶ ನೆಲವಾಡೆ, ವಿನಾಯಾಕ ಮೋರೆ ಇದ್ದರು. Advertisement
ಮಾಂಜ್ರಾ ನದಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹ
11:36 AM Jul 07, 2020 | Suhan S |
Advertisement
Udayavani is now on Telegram. Click here to join our channel and stay updated with the latest news.