Advertisement

ಜಿಲ್ಲೆಯಲ್ಲಿ ಅಟಲ್‌ ಭೂಜಲ್‌ ಅನುಷ್ಠಾನ

06:32 AM Jun 20, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಅಟಲ್‌ ಭೂಜಲ್‌ ಯೋಜನೆಯನ್ನು ಜಿಲ್ಲೆಯ ಆರು ತಾಲೂಕುಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌ ಜಿಲ್ಲಾ  ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಟಲ್‌ ಭೂಜಲ್‌ ಯೋಜನೆ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಅಂತರ್ಜಲ  ಅಭಿವೃದ್ಧಿ, ಜಲ ಸಂರಕ್ಷಣೆ ಹಾಗೂ ನೀರಿನ ಮಿತವ್ಯಯ ಬಳಕೆಯಿಂದ ನೀರಿನ ಕೊರತೆ ನಿವಾರಿಸಲು ಹಾಗೂ ರೈತರ ಆದಾಯವ ನ್ನು ದ್ವಿಗುಣಗೊಳಿಸುವ ಮತ್ತು ಲಭ್ಯವಿರುವ ಸಂಪ  ನ್ಮೂಲ ಬಳಸಿಕೊಂಡು ಎಲ್ಲಾ ಇಲಾಖೆ  ಕಾರ್ಯಕ್ರಮಗಳ ಒಗ್ಗೂಡಿಸುವಿಕೆಯಿಂದ ಸಮಗ್ರ ರೀತಿಯಲ್ಲಿ ನಿರ್ವಹಿಸುವ ಯೋಜನೆ ರೂಪಿಸಲಾಗಿದೆ ಎಂದರು.

ಯಶಸ್ವಿಗೊಳಿಸಲು ಸೂಚನೆ: ಅಟಲ್‌ ಭೂಜಲ್‌ ಯೋಜನೆಯ ಅನುದಾನವು ಜಿಲ್ಲೆಗೆ ಲಭ್ಯವಿದ್ದು, ಅಗತ್ಯ ದತ್ತಾಂಶದ  ವಿವರಗಳನ್ನು ಗ್ರಾಮ ಪಂಚಾಯಿತಿ  ವಾರು ಒದಗಿಸುವಂತೆ ಹಾಗೂ ವಿವಿಧ ಇಲಾಖಾವಾರು ಮುಖ್ಯಸ್ಥರು ಆಯಾ ಇಲಾಖೆಯ ಕಾರ್ಯಕ್ರಮಪಟ್ಟಿ ತಯಾರಿಸಿ, ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮ  ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಲಶಕ್ತಿ ಸಚಿವಾಲಯ ಪ್ರಸ್ತಾಪಿಸಿರುವ ಭೂಜಲ್‌ ಯೋಜನೆ ಕೇಂದ್ರ ವಲಯ ಯೋಜನೆಯಾ ಗಿದ್ದು, ರಾಜ್ಯ ಸರ್ಕಾರಿ ಸಂಸ್ಥೆಗಳು, ಪಂಚಾಯತ್‌ ರಾಜ್‌ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ನೀರು ಬಳಕೆದಾರರ  ಸಂಘಗಳು, ರೈತರು ಮತ್ತು ಇತರ ಆಸಕ್ತ ದಾರರನ್ನು ಒಳಗೊಂಡು ರೈತರ ಆದಾಯ ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ಸಮಗ್ರ ರೀತಿಯಲ್ಲಿ ನಿರ್ವಹಿಸಲು ವಿನ್ಯಾಸ ಗೊಳಿಸಲಾಗಿದೆ ಎಂದು  ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next