Advertisement

ಜಮಖಂಡಿ ಕ್ವಾರಂಟೈನ್‌ ಕೇಂದ್ರದ ಎದುರು ವಲಸೆ ಕಾರ್ಮಿಕರ ಪ್ರತಿಭಟನೆ

06:13 AM May 27, 2020 | Suhan S |

ಜಮಖಂಡಿ: ನಗರದ ದೇವರಾಜ ಅರಸು ವಸತಿ ನಿಲಯದ ಕ್ವಾರಂಟೈನ್‌ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಕಳೆದ 16 ದಿನಗಳ ಹಿಂದೆ ನಗರಕ್ಕಾಗಮಿಸಿದ ನಮ್ಮನ್ನು ವಸತಿ ನಿಲಯದಲ್ಲಿ ಕ್ವಾರಂಟೈನ್‌ ಮಾಡಿದ್ದು, ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ನಮಗೆ ವರದಿಯ ಫಲಿತಾಂಶ ಇನ್ನೂ ಹೇಳಿಲ್ಲ. ಇಲ್ಲಿ ಊಟದ ವ್ಯವಸ್ಥೆ ಸರಿಯಾಗಿಲ್ಲ ಎಂದು ತಕರಾರು ತೆಗೆದರು. ನೀರಿನ ಖಾಲಿ ಬಾಟಲ್‌, ತಟ್ಟೆಗಳಿಂದ ಬಾರಿಸಿ ವಸತಿ ನಿಲಯದ ಗೇಟ್‌ ಹತ್ತಿರ ಪ್ರತಿಭಟನೆ ನಡೆಸಿದ ಕಾರ್ಮಿಕರು, ನಮ್ಮೊಂದಿಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಅವರಿಗೆ ಹಾಲು ಕೊಡಬೇಕು. ನಮ್ಮನ್ನು ಬಿಟ್ಟುಬಿಡಿ, ನಾವು ಮನೆಗೆ ಹೋಗುತ್ತೇವೆ ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next