Advertisement
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಧವನ್, “ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಆತಂಕಕ್ಕೆ ಒಳಗಾಗದೇ ಇದ್ದುದ್ದರಿಂದ ಮತ್ತೆ ಫಾರ್ಮ್ಗೆ ಮರಳಲು ಸಾಧ್ಯವಾಯಿತು’ ಎಂದಿದ್ದಾರೆ.
“ಮೊದಲನೆಯದಾಗಿ ನಾನು ಪತ್ರಿಕೆಗಳನ್ನು ಓದುವುದಿಲ್ಲ. ನನಗೆ ಬೇಡವಾದ ಯಾವ ಸಂಗತಿಗಳನ್ನೂ ತಲೆಗೆ ತೆಗೆದುಕೊಳ್ಳಲ್ಲ. ನನ್ನ ಚಿತ್ತವಿದ್ದದ್ದು ಮತ್ತೆ ಫಾರ್ಮ್ಗೆ ಮರಳುವುದರ ಕಡೆಗೆ ಮಾತ್ರ. ಅದರಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಜಗತ್ತಿನಲ್ಲಿ ನಾನಿದ್ದೇನೆ. ಸುತ್ತಲೂ ಏನು ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಬಗ್ಗೆ ನನಗೆ ಯಾವ ಆಸಕ್ತಿಯೂ ಇಲ್ಲ. ನಾನು ಖುಷಿಯಿಂದ ಜೀವಿಸುತ್ತಿದ್ದೇನೆ’ ಎಂಬುದಾಗಿ ಧವನ್ ಹೇಳಿದರು. ಧವನ್ ಕಳೆದ 17 ಇನ್ನಿಂಗ್ಸ್ಗಳಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಇದರಿಂದಾಗಿ ಭಾರತೀಯ ಅಗ್ರ ಕ್ರಮಾಂಕದ ಬ್ಯಾಟಿಂಗ್ ಮೇಲೆ ಭಾರೀ ಹೊಡೆತ ಬಿದ್ದಿತ್ತು. ಸಹಜವಾಗಿಯೇ ಧವನ್ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಇದರಿಂದ ಮುಂದಿನ ವಿಶ್ವಕಪ್ ತಂಡದ ಆಯ್ಕೆ ಮೇಲೆ ಪರಿಣಾಮ ಬೀರಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ 4ನೇ ಏಕದಿನ ಪಂದ್ಯದಲ್ಲಿ ಧವನ್ ಮತ್ತೆ ಸಿಡಿದುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿನ ರಿಲ್ಯಾಕ್ಸ್ ನೀಡಿದೆ.