Advertisement

ಇಲ್ಯಾಸ್‌ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

07:00 AM Feb 10, 2018 | Team Udayavani |

ಮಂಗಳೂರು:  ಟಾರ್ಗೆಟ್‌ ಗ್ರೂಪ್‌ನ ಇಲ್ಯಾಸ್‌ ಹತ್ಯೆ  ಸಂಬಂಧಿಸಿ ಇಬ್ಬರನ್ನು ಮಂಗಳೂರು ಸಿಸಿಬಿ ಹಾಗೂ ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಅಬ್ಬಕ್ಕ ವೃತ್ತದಲ್ಲಿರುವ ಸಲಫಿ ಮಸೀದಿ ಬಳಿಯ ನಿವಾಸಿ ಮಹಮ್ಮದ್‌ ಸಮೀರ್‌ (27) ಮತ್ತು ಮಂಜೇಶ್ವರ ಗೇರುಕಟ್ಟೆಯ ನಮೀರ್‌ ಹಂಝ (34) ಬಂಧಿತರು.  
 ಜ.13ರಂದು ಬೆಳಗ್ಗೆ ಇಲ್ಯಾಸ್‌ನನ್ನು ನಗರದ ಜಪ್ಪು ಕುಡುಪಾಡಿ ಜುಮ್ಮಾ ಮಸೀದಿ ಬಳಿಯ ಅವರ ಮನೆಯಲ್ಲಿ  ಕೊಲೆ ಮಾಡಲಾಗಿತ್ತು.

Advertisement

ಹಳೆ ಆರೋಪಿಗಳು: ಆರೋಪಿ ಸಮೀರ್‌ ಈ ಹಿಂದೆ ಟಾರ್ಗೆಟ… ಗ್ರೂಪ್‌ನ ಸುರ್ಮಾ ಇಮ್ರಾನ್‌  ಮೇಲೆ ಹಲ್ಲೆ ನಡೆಸಿದ ಪ್ರಕರಣ ಮತ್ತು  ಟಾರ್ಗೆಟ… ಗ್ರೂಪ್‌ನ ಹಂಝನ ಮನೆಗೆ ಹಾನಿ ಮಾಡಿ, ಮನೆ ಮಂದಿಗೆ ಹಲ್ಲೆ ನಡೆಸಿದ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ನಮೀರ್‌ ಹಂಝನ ಮೇಲೆ ಕೊಣಾಜೆ ಠಾಣೆಯಲ್ಲಿ ಒಂದು ಕೊಲೆ ಯತ್ನ, ಸುರತ್ಕಲ… ಠಾಣೆಯಲ್ಲಿ ಒಂದು ದರೋಡೆ ಪ್ರಕರಣ, ಬಂದರು   ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಕಿಡ್ನಾಪ್‌ ಪ್ರಕರಣ ದಾಖಲಾಗಿವೆ.

ಆರೋಪಿಗಳು  ಕೊಲೆ ನಡೆಸಿದ ಬಳಿಕ ಕೇರಳದ ಕಡೆಗೆ ತೆರಳಿ ತಲೆಮ ರೆಸಿದ್ದರು.  ಸುಳಿವು ಸಿಗದಂತೆ ಮೊಬೈಲ್‌ ಬಳಸುತ್ತಿರಲಿಲ್ಲ. ಆದರೂ ಪೊಲೀ ಸರು ಕಾರ್ಯಾಚರಣೆ ನಡೆಸಿ ಆರೋ ಪಿಗಳನ್ನು ಬಂಧಿಸಿದ್ದಾರೆ. ಅವರನ್ನು ವಿಚಾರಣೆ ನಡೆಸಿ, ಪ್ರಕರಣದಲ್ಲಿ ಇನ್ನು ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವ  ಮಾಹಿತಿ ಸಂಗ್ರಹಿಸಿ ಅವರನ್ನು ಬಂಧಿಸಲಾಗುವುದು.  ಸಮೀರ್‌ ಈ ಕೊಲೆ ಪ್ರಕರಣದಲ್ಲಿ  ನೇರವಾಗಿ ಭಾಗಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. 

ದಾವೂದ್‌ ವಶಕ್ಕೆ ?
ಪ್ರಮುಖ ಸೂತ್ರಧಾರಿ ಧರ್ಮನಗರದ ದಾವೂದ್‌ನನ್ನು  ಸಿಸಿಬಿ ಪೊಲೀಸರು ಶನಿವಾರ ಮುಂಬಯಿಯಲ್ಲಿ ವಶಕ್ಕೆ ಪಡೆದಿದ್ದಾರೆಂಬ ಮಾಹಿತಿ ಇದೆ.  ಆತನನ್ನು ನಗರಕ್ಕೆ ಕರೆದುಕೊಂಡು ಬರುತ್ತಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next