Advertisement

ಅಕ್ರಮ ಯೂರಿಯಾ ದಾಸ್ತಾನು ಆರೋಪ : ಆರೋಪಿಗಳ ಬಂಧನ

11:14 AM Aug 27, 2020 | sudhir |

ಪಿರಿಯಾಪಟ್ಟಣ: ಖಚಿತ ಮಾಹಿತಿ ಮೇರೆಗೆ ತಾಲೂಕಿನ ಕುಂದನಹಳ್ಳಿ ಗ್ರಾಮದ ಜಮೀನಿನಲ್ಲಿ ಕೋಳಿ ಫಾರ್ಮ್ ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ರಸಗೊಬ್ಬರವನ್ನು ತಾಲೂಕು ಆಡಳಿತ, ಕೃಷಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಬುಧವಾರ ನಡೆದಿದೆ.

Advertisement

ತಾಲೂಕಿನ ಕುಂದನಹಳ್ಳಿ ಗ್ರಾಮದ ಜಮೀನಿನ ಕೋಳಿ ಫಾರ್ಮ್ ಹಳೆಯ ಗೋಡೌನ್‌ ನಲ್ಲಿ ವಿವಿಧ ಕಂಪನಿಗಳ ಸುಮಾರು 35 ಟನ್‌ ಯೂರಿಯಾ ರಸಗೊಬ್ಬರವನ್ನು

ಮಾಡಲು ಶೇಖರಿಸಿಟ್ಟಿದ್ದ ಕೇರಳ ಮೂಲದ ರಾಯ್, ನೌಷಾದ್‌ ಹಾಗೂ ಹಂಸ ಇಬ್ರಾಹಿಂ ಎಂಬವರನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಸ್ತಾನು, ದಾಖಲೆ ಪರಿಶೀಲನೆ: ರೈತರು ನೀಡಿದ್ದ ದೂರನ್ನು ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ಕೋಳಿ ಫಾರ್ಮ್ ಧಾವಿಸಿ ದಾಸ್ತಾನು ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಮಂಗಳ, ಜೈ ಕಿಸಾನ್‌, ಇಪೋ ಕಂಪನಿಗಳ ಯೂರಿಯವನ್ನು ಸಂಗ್ರಹಿಸಿ, ನೊಂದಣಿಯಾಗಿರದ ಸೆಂಜಾವ್‌ ಎಂಬ ಕಂಪನಿ ಹೆಸರಿನಲ್ಲಿ ಮಾರಾಟ ಮಾಡಲು ಕಂಪನಿಗಳ ಹೆಸರನ್ನು ಅದಲು ಬದಲು ಮಾಡಿ ಮಾರಾಟ ಮಾಡಲು ತೀರ್ಮಾನಿಸಿದ್ದರು.

ಈ ವಿಷಯ ತಿಳಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಪಿಐ ಪ್ರದೀಪ್‌ ಹಾಗೂ ತಹ ಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ನೇತೃತ್ವದಲ್ಲಿ ದಾಳಿ ನಡೆಸಿ, ಕೆವಲ ಅರ್ಧ ಗಂಟೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹೆಚ್ಚಿನ ಬೆಲೆಗೆ ಮಾರಾಟ: ಆರೋಪಿಗಳು ಚೀಲಗಳನ್ನು ಮೈಸೂರು ಕಂಪನಿಯ ವಿಳಾಸ ನೀಡಿ ಕೇರಳದಲ್ಲಿ ಪ್ರಿಂಟ್‌ ಮಾಡಿಸಿ, ಯೂರಿಯಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಈ ಜಾಗವನ್ನು ಬಾಡಿಗೆ ಪಡೆದು ಕಂಪನಿ ಚೀಲಗಳನ್ನು ಬದಲಿಸಿ, ಬೇರೆಬೇರೆ ಕಂಪನಿ ಹೆಸರಿನಲ್ಲಿ ಮಾರಾಟ ಮಾಡಲು ತೀರ್ಮಾನಿಸಿದ್ದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೆಚ್ಚಿನ ವಿವರಣೆಗಾಗಿ ಅವರನ್ನು ಪೊಲೀಸ್‌ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಈ ಯೂರಿಯಾ ರಸಗೊಬ್ಬರವನ್ನು ಪಟ್ಟಣದ ಎಪಿಎಂಸಿ ಗೋಡೌ ನ್‌ಗೆ ಸಾಗಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಹಂತೇಶಪ್ಪ ತಿಳಿಸಿದ್ದಾರೆ.

ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ, ಜಂಟಿ ನಿರ್ದೇಶಕ ಮಹಂತೇಶಪ್ಪ, ಉಪ ನಿರ್ದೇಶಕ ಧನಂಜಯ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್‌, ಬಿ.ಆರ್‌.ಪ್ರದೀಪ್‌, ಎಎಸ್‌ಐಗಳಾದ ಜಮೀರ್‌ ಅಹಮ್ಮದ್‌ ಖಾನ್‌, ಚಿಕ್ಕ ನಾಯ್ಕ, ಅಸ್ಲಾಂ ಪಾಷಾ, ಕೃಷಿ ಅಧಿಕಾರಿಗಳಾದ
ದಿವಾಕರ್‌, ಮಹೇಶ್‌, ಹರೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next