Advertisement

ಅರಣ್ಯಾಧಿಕಾರಿ ಮೇಲೆ ಟ್ರಾಕ್ಟರ್‌ ಓಡಿಸಿ ಕೊಂದ ಆರೋಪಿ ಸೆರೆ

04:18 PM Sep 08, 2018 | Team Udayavani |

ಮೊರೇನಾ, ಮಧ್ಯ ಪ್ರದೇಶ : ಅರಣ್ಯಾಧಿಕಾರಿ ಸುಬೇದಾರ್‌ ಸಿಂಗ್‌ ಕುಶವಾಹ ಅವರ ಮೇಲೆ ಮರಳು ತುಂಬಿದ ಟ್ರಾಕ್ಟರ್‌ ಟ್ರಾಲಿಯನ್ನು ಓಡಿಸಿ ಕೊಂದ ಆರೋಪದ ಮೇಲೆ 35ರ ಹರೆಯದ ವ್ಯಕ್ತಿಯನ್ನು ಪೊಲೀಸರು ಇಂದು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ.

Advertisement

ಘಟನೆ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಚಿತ್ರಿಕೆಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ದೇವೇಂದ್ರ ಗುರ್ಜರ್‌ ನನ್ನು ಬಂಧಿಸುವಲ್ಲಿ ಸಫ‌ಲರಾದರು. 

ಇಲ್ಲಿಗೆ ಸಮೀಪದ ಧನಾಲಾ ಗ್ರಾಮದಲ್ಲಿ ತನ್ನನ್ನು  ಬಂಧಿಸಲು ಪೊಲೀಸರು ಸ್ಥಳಕ್ಕೆ ಬರುವುದನ್ನು ಕಾಣುತ್ತಲೇ ದೇವೇಂದ್ರ ಗುರ್ಜರ್‌ ಪರಾರಿಯಾಗುವ ಯತ್ನದಲ್ಲಿ ಮೊದಲು ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದ. ಆದರೂ ಆತನನ್ನು ಪೊಲೀಸರು ಬೆನ್ನಟ್ಟಿ ಸೆರೆ ಹಿಡಿದರು ಎಂದು ಮೊರೇನಾ ಎಸ್‌ಪಿ ಅಮಿತ್‌ ಸಾಂಗಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next