Advertisement

Mangaluru ವಿವಿಧೆಡೆ ಅಕ್ರಮ ಮರಳುಗಾರಿಕೆ: 5 ದೋಣಿಗಳು ವಶಕ್ಕೆ

12:18 AM Dec 19, 2023 | Team Udayavani |

ಮಂಗಳೂರು: ಮಂಗಳೂರು ತಾಲೂಕಿನ ಕಣ್ಣೂರು, ಬಜಾಲ್‌ ಮತ್ತು ಬಡ್ಲ ಗ್ರಾಮಗಳ ವ್ಯಾಪ್ತಿಯ ಸಿಆರ್‌ಝಡ್‌ ವಲಯದಲ್ಲಿ ಹರಿಯುವ ನೇತ್ರಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 5 ದೋಣಿಗಳನ್ನು ಸೋಮವಾರ ಹಿರಿಯ ಭೂವಿಜ್ಞಾನಿ ಕೆ.ಎಂ. ನಾಗಭೂಷಣ್‌, ಭೂ ವಿಜ್ಞಾನಿಗಳಾದ ಗಿರೀಶ್‌ ಮೋಹನ್‌ ಎಸ್‌.ಎನ್‌. ಮತ್ತು ಡಾ| ಮಹದೇಶ್ವರ ಎಚ್‌.ಎಸ್‌. ಅವರನ್ನೊಳಗೊಂಡ ತಂಡ ವಶಕ್ಕೆ ಪಡೆದಿದೆ.

Advertisement

ದೋಣಿಗಳ ಮಾಲಕರಾದ ಬಜಾಲ್‌ ಪಡು³ವಿನ ಮೊಹಮ್ಮದ್‌ ತೋಹಿಬ್‌, ಬೋರುಗುಡ್ಡೆಯ ಮೊಹಮ್ಮದ್‌ ಅಶ್ರಫ್, ಫೈಸಲ್‌ನಗರದ ಅಝರ್‌, ಬಜಾಲ್‌ನ ಹಸನಬ್ಬ ಮತ್ತು ಪಳ್ಳಿಗುಡ್ಡೆಯ ಅಬ್ದುಲ್‌ ರೆಹಮಾನ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next