Advertisement

ಎಸ್‌ಪಿ, ಬಿಎಸ್‌ಪಿಗೆ ಅಕ್ರಮ ವಲಸಿಗರು ಓಟ್‌ ಬ್ಯಾಂಕ್‌ : ಅಮಿತ್‌ ಶಾ

01:27 PM Feb 08, 2019 | Team Udayavani |

ಹೊಸದಿಲ್ಲಿ : ‘ಬಿಜೆಪಿಗೆ ಅಕ್ರಮ ವಲಸಿಗರ ಪ್ರಶ್ನೆ ರಾಷ್ಟ್ರೀಯ ಭದ್ರತೆಯದ್ದಾದರೆ, ಎಸ್‌ಪಿ ಮತ್ತು ಬಿಎಸ್‌ಪಿಗೆ ಅದು ಓಟ್‌ ಬ್ಯಾಂಕ್‌ ವಿಷಯವಾಗಿದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

Advertisement

ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಚುನಾವಣಾ ಪೂರ್ವ ಮೈತ್ರಿಯನ್ನು ಟೀಕಿಸಿದ ಅಮಿತ್‌ ಶಾ, ಅಕ್ರಮ ವಲಸಿಗರ ಪ್ರಶ್ನೆಯನ್ನು ರಾಷ್ಟ್ರೀಯ ಹಿತಾಸಕ್ತಿಯ ವಿಷಯನ್ನಾಗಿ ರಾಜಕೀಯ ಪಕ್ಷಗಳು ಪರಿಗಣಿಸಬೇಕು ಎಂದು ಹೇಳಿದರು. 

ಅಮಿತಾ ಶಾ ಅವರು ಮಹಾರಾಜಾಗಂಜ್‌ ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. 

‘ಪ್ರಸ್ತಾವಿತ ರಾಮ ಮಂದಿರವನ್ನು ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ನಿರ್ಮಿಸುವುದಕ್ಕೆ ಬಿಜೆಪಿ ಬದ್ಧವಿದೆ; ಅಂತೆಯೇ ಅದು ಈ ವಿಷಯದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಅಭಿಪ್ರಾಯ ಕೇಳಿಲಿದೆ’ ಎಂದು ಹೇಳಿದರು. ‘ವಿರೋಧ ಪಕ್ಷಗಳು ರಾಮ ಮಂದಿರ ನಿರ್ಮಾಣ ಕುರಿತ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ’ ಶಾ ಸವಾಲು ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next