Advertisement

ಕಾನೂನು ಬಾಹಿರ ಲೇಔಟ್‌ ಮುಟ್ಟು ಗೋಲಿಗೆ ಆಗ್ರಹ

08:41 PM Jun 02, 2021 | Girisha |

ಮುದ್ದೇಬಿಹಾಳ: ಕಾನೂನು ಬಾಹಿರ ಲೇಔಟ್‌ ಗಳನ್ನು ಪುರಸಭೆ ಮುಟ್ಟುಗೋಲು ಹಾಕಿಕೊಳ್ಳಬೇಕು. ಕಾಯ್ದೆ ಪ್ರಕಾರ ಇದ್ದ ಲೇಔಟ್‌ಗಳ ಮಾಲಿಕರಿಗೆ ತೊಂದರೆ ನೀಡಬಾರದು ಎಂದು ಪುರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

Advertisement

ಪುರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಸದಸ್ಯರಾದ ಅಲ್ಲಾಭಕ್ಷ ಢವಳಗಿ, ಮಹಿಬೂಬ ಗೊಳಸಂಗಿ, ಹುಲಗಪ್ಪ ನಾಯಕಮಕ್ಕಳ, ಸುನೀಲ ಹಡಲಗೇರಿ, ಸದಾನಂದ ಮಾಗಿ ಮತ್ತಿತರರು ಮಾತನಾಡಿ, ಲೇಔಟ್‌ಗಳ 2, 3, 4ನೇ ಮಾಲೀಕರಿಗೆ ಉತಾರ ಕೊಡಬೇಕು. ಇವರಿಗೆ ವಿನಾಕಾರಣ ತೊಂದರೆ ಕೊಡಬಾರದು. ಹಿಂದೇನಾಗಿದೆಯೋ ಬೇಕಾಗಿಲ್ಲ. ಮುಂದೆಯಾದರೂ ಎಲ್ಲರೂ ಕಾಯ್ದೆ ಪ್ರಕಾರ ಇರುವಂತೆ ನೋಡಿಕೊಳ್ಳಿ.

ದಂಡ ಹಾಕಲು ಇರುವ ಅವಕಾಶ ಬಳಸಿಕೊಂಡು ಪುರಸಭೆಗೆ ಲಾಭ ಆಗುವಂತೆ ಮಾಡಿ ಪಟ್ಟಣದ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಪುರಸಭೆಯಲ್ಲಿ ಕೆಲ ಸಿಬ್ಬಂದಿ ಲಂಚ ತೆಗೆದುಕೊಂಡು ಒಳ ಬಾಗಿಲಿನಿಂದ ಉತಾರ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ತಪಾಸಣೆ ನಡೆಸಿ ಇದನ್ನು ತಡೆಗಟ್ಟಬೇಕು.

ಇದು ಹೀಗೆಯೆ ಮುಂದುವರಿದಲ್ಲಿ ಪುರಸಭೆ ಆಡಳಿತ ಮಂಡಳಿ ಹೆಸರು ಕೆಡುತ್ತದೆ ಎಂದು ಸದಸ್ಯರಾದ ಬಸವರಾಜ ಮುರಾಳ, ಸಂಗಮ್ಮ ದೇವರಳ್ಳಿ ಆರೋಪಿಸಿದಾಗ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಅವರು ಹಾಗೇನು ನಡೆದಿದ್ದು ಕಂಡು ಬಂದಿಲ್ಲ. ಒಂದು ವೇಳೆ ಇಂಥದ್ದು ನಡೆಯುತ್ತಿದ್ದರೆ ತಡೆಗಟ್ಟಲಾಗುತ್ತದೆ ಎಂದು ಸಮಾಧಾನಪಡಿಸಲು ಯತ್ನಿಸಿದರು.

ಕೋವಿಡ್‌ ಜಾಗೃತಿ: ಕೋವಿಡ್‌-19 ನಗರ ಮೇಲ್ವಿಚಾರಕ ಎಂ.ಎಸ್‌. ಗೌಡರ ಮಾತನಾಡಿ, ಕೋವಿಡ್‌ ನಿಯಂತ್ರಿಸಲು ಜನರ ಸಹಕಾರ ಅಗತ್ಯವಾಗಿದೆ. ಪಟ್ಟಣದ ಕೆಲವು ಏರಿಯಾಗಳು ಹೈ ರಿಸ್ಕ್ ಆಗಿದ್ದು ಅಲ್ಲಿ ಹೆಚ್ಚಿನ ಕಾಳಜಿ ತೋರಿಸಬೇಕು. ಸುಧಾರಿಸಿದ ಏರಿಯಾಗಳಲ್ಲೇ ಜಾಸ್ತಿ ಪ್ರಕರಣಗಳು ಕಂಡು ಬಂದಿವೆ. ಹಳೆ ಏರಿಯಾಗಳಲ್ಲಿ ಪ್ರಕರಣ ಕಡಿಮೆ ಇದೆ. ಆಶಾ, ಆರೋಗ್ಯ ಕಾರ್ಯಕರ್ತೆಯರು ಶ್ರಮವಹಿಸಿ ನಿಯಂತ್ರಣಕ್ಕೆ ತಂದಿದ್ದಾರೆ.

Advertisement

ಪುರಸಭೆ ಆಡಳಿತವೂ ಹೆಚ್ಚಿನ ಕಾಳಜಿ ತೋರಿಸಿ ಪ್ರತಿಯೊಂದು ವಾರ್ಡ್‌ನಲ್ಲೂ ಕೊರೊನಾ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿ ಸಿದ ಆಡಳಿತ ಮಂಡಳಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವ್ಯಾವ ಏರಿಯಾಗಳಲ್ಲಿ ಸಮಸ್ಯೆ ಹೆಚ್ಚಾಗಿದೆಯೋ ಅಂಥ ಏರಿಯಾಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಎಲ್ಲ ಸದಸ್ಯರು, ಪೌರ ಕಾರ್ಮಿಕರು ಶ್ರಮಿಸಬೇಕು ಎಂದು ತೀರ್ಮಾನಿಸಲಾಯಿತು. ಸನ್ಮಾನ: ಸಭೆ ಆರಂಭದಲ್ಲಿ ಸರ್ಕಾರದಿಂದ ಪುರಸಭೆಗೆ ನೂತನವಾಗಿ ನಾಮನಿರ್ದೇಶಿತಗೊಂಡ ಸದಸ್ಯರಾದ ರಾಜಶೇಖರ ಹೊನ್ನುಟಗಿ, ರಾಜಶೇಖರ ಹೊಳಿ, ಹುಲಗಪ್ಪ ನಾಯಕಮಕ್ಕಳ, ಸುನೀಲ ಹಡಲಗೇರಿ ಅವರನ್ನು ಸನ್ಮಾನಿಸಲಾಯಿತು.

ಸಂತಾಪ: ಕೋವಿಡ್‌ ಮಹಾಮಾರಿಗೆ ಬಲಿಯಾದ ಪುರಸಭೆ ಮಾಜಿ ಅಧ್ಯಕ್ಷ ರಸೂಲ್‌ದೇಸಾಯಿ, ಬಸವರಾಜ ಸುಕಾಲಿ, ನೂತನವಾಗಿ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿದ್ದರೂ ಅ ಧಿಕಾರ ಸ್ವೀಕರಿಸುವ ಮುನ್ನವೇ ನಿಧನರಾದ ಮನೋಹರ ತುಪ್ಪದ ಸೇರಿ ಪಟ್ಟಣ ವ್ಯಾಪ್ತಿಯಲ್ಲಿ ನಿಧನರಾದ ಇನ್ನಿತರರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಿ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ, ಪ್ರಭಾರ ಮುಖ್ಯಾಧಿ ಕಾರಿಎಂ.ಬಿ.ಮಾಡಗಿ ಸೇರಿ ಸಿಬ್ಬಂದಿ ಸಂತಾಪ ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next