Advertisement

ಯೋಜನೆಗಳಲ್ಲಿ ಅಕ್ರಮ; ತನಿಖೆಗೆ ಜೆಡಿಎಸ್‌ ಒತ್ತಾಯ

12:27 PM Mar 24, 2022 | Team Udayavani |

ಚಿಂಚೋಳಿ: ತಾಲೂಕು ಸಹಾಯಕ ಕೃಷಿ ಇಲಾಖೆಯಲ್ಲಿ ಸರ್ಕಾರ ರೈತರಿಗೋಸ್ಕರ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಅವುಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ತಾಲೂಕು ಜೆಡಿಎಸ್‌ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಜೆಡಿಎಸ್‌ ಮುಖಂಡ ಸಂಜೀವನ್‌ ಯಾಕಾಪುರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಕೃಷಿ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳಾದ ಕೃಷಿ ಹೊಂಡ ನಿರ್ಮಾಣ, ಕೃಷಿ ಭಾಗ್ಯ, ಎಸ್‌ ಸಿಪಿ, ಟಿಎಸ್‌ಪಿ ಯೋಜನೆ ಅಡಿ ರೈತರಿಗೆ ತಾಡಪತ್ರಿ ವಿತರಣೆ, ಸಿಂಕ್ಲರ್‌ ಪೈಪು ವಿತರಣೆ, ಕೃಷಿ ಯಂತ್ರೋಪರಣ, ಹಿಂಗಾರು ಮತ್ತು ಮುಂಗಾರು ಬಿತ್ತನೆ ಬೀಜಗಳ ವಿತರಣೆಯಲ್ಲಿ ಅನುದಾನದ ದುರ್ಬಳಕೆಯಾಗಿದ್ದು, ಈ ಕುರಿತು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಕಳೆದ ಎಂಟೊಂಬತ್ತು ತಿಂಗಳ ಹಿಂದೆ ಕೃಷಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳಿಗೆ ಈ ಕುರಿತು ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರ ಮುತ್ತಂಗಿ ಮಾತನಾಡಿ, ಕೃಷಿಹೊಂಡ, ಕೃಷಿಭಾಗ್ಯ, ಎಸ್‌ಸಿಪಿ, ಎಸ್‌ಸಿಪಿ ಯೋಜನೆಗಳಲ್ಲಿ ನಡೆದ ಎಲ್ಲ ಕಾಮಗಾರಿಗಳ ಸಮಗ್ರ ಜಿಪಿಆರ್‌ಎಸ್‌ ಪೋಟೋಗಳೊಂದಿಗೆ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ತಾಲೂಕು ಕೃಷಿ ಇಲಾಖೆಯಲ್ಲೂ ಅನೇಕ ಅಕ್ರಮಗಳು ನಡೆದಿದ್ದು, ಸಹಾಯಕ ಕೃಷಿ ನಿರ್ದೇಶಕರು, ಕಲಬುರಗಿ ಜಂಟಿ ನಿರ್ದೇಶಕರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

Advertisement

ಜೆಡಿಎಸ್‌ ಮುಖಂಡ ನಿಯಾಜ ಅಲಿ ಮಾತನಾಡಿ, ತಾಲೂಕಿನ ದೋಟಿಕೊಳ, ರುಸ್ತಂಪುರ, ಖುದಾವಂದಪುರ ಗ್ರಾಮಗಳಲ್ಲಿ 2018ರಲ್ಲಿ ಸುಜಲಾ 2 ಯೋಜನೆ ಅಡಿಯಲ್ಲಿ ಎಲ್ಲ ಹಂತದ ಕಾಮಗಾರಿಗಳ ಕುರಿತು ಜಿಪಿಆರ್‌ ಎಸ್‌ ಪೋಟೋಗಳ ಸಮೇತ ತನಿಖೆ ನಡೆಬೇಕು. ಸುಜಲಾ 2 ಯೋಜನೆಗೆ ಬಿಡುಗಡೆಯಾದ 18ಕೋಟಿ ರೂ. ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿವಿಧ ಬೇಡಿಕೆಗಳ ಮನವಿಪತ್ರವನ್ನು ತಹಶೀಲ್ದಾರ್‌ ಅಂಜುಮ ತಬಸುಮ, ಸೇಡಂ ಕೃಷಿ ಉಪ ಕಾರ್ಯದರ್ಶಿಗಳಿಗೆ ಸಲ್ಲಿಸಿದರು. ಮುಖಂಡರಾದ ಸುರೇಂದ್ರಕುಮಾರ ಕುಂಚಾವರಂ, ಗೌರಿಶಂಕರ ಸೂರವಾರ, ಶರಣಪ್ಪ ಮಾಳಗಿ, ವಿಷ್ಣುಕಾಂತ ಮೂಲಗೆ, ಹಣಮಂತ ಪೂಜಾರಿ, ರಾಹುಲ್‌ ಯಾಕಾಪುರ, ರವೀಂದ್ರ ಮಾಳಗಿ, ಕಲಾವತಿ ಕನಕಟ್ಟಿ, ನಾಗೀಂದ್ರಪ್ಪ ಗುರಂಪಳ್ಳಿ, ಅರವಿಂದ ಜೋತಗೊಂಡ, ಬಸವರಾಜ ಸಿರಸಿ, ಸನ್ನಿ ಜಾಬಶೆಟ್ಟಿ, ದವಲಪ್ಪ ಸುಣಗಾರ, ಕುಂಚಾವರಂ, ಚಿಮ್ಮನಚೋಡ, ಮಿರಿಯಾಣ, ಐನೋಳಿ, ದೇಗಲಮಡಿ, ಚಂದನಕೇರಾ, ಸುಲೇಪೇಟ, ಚಂದಾಪುರ ಇನ್ನಿತರ ಗ್ರಾಮಗಳಿಂದ ಜೆಡಿಎಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next