Advertisement

ಚಂದ್ರಮೌಳೇಶರ ದೇವಸ್ಥಾನದ ಸುತ್ತ ಅಕ್ರಮ ಗಣಿಗಾರಿಕೆ

03:21 PM Mar 24, 2022 | Team Udayavani |

ಗುಂಡ್ಲುಪೇಟೆ:  ತಾಲೂಕಿನ ಹಿರೀಕಾಟಿ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಚಂದ್ರಮೌಳೇಶ್ವರ ದೇವಸ್ಥಾನದ ಅಕ್ಕಪಕ್ಕದ ಸರ್ಕಾರಿ ಗೋಮಾಳದಲ್ಲಿ ಲೀಸ್‌ ನೆಪದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ರಾಜಕೀಯ ಪ್ರಭಾವ ಬಳಸಿ ಕಲ್ಲು ಲೂಟಿ ಒಡೆಯಲಾಗಿದೆ. ಹೀಗಿದ್ದರೂ ಕೂಡ ಈ ಬಗ್ಗೆ ಅಧಿಕಾರಿಗಳು ಚಕಾರ ಎತ್ತದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಹಿರೀಕಾಟಿ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಚಂದ್ರಮೌಳೇಶ್ವರ ದೇವಸ್ಥಾನದ ಸುತ್ತ ಮುತ್ತಲಿನ ಜಾಗದಲ್ಲಿ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜಕೀಯ ಒತ್ತಡಕ್ಕೆ ಮಣಿದು ಲೀಸ್‌ ನೀಡಿದ್ದಾರೆ ಎಂದು ದೊಡ್ಡಹುಂಡಿ, ಹಿರೀಕಾಟಿ, ಕೃಷ್ಣಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಹಿರೀಕಾಟಿ ಗ್ರಾಮದ ಸ.ನಂ.108ರಲ್ಲಿ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆದಿರುವ ಕಾರಣ ಕ್ವಾರಿಯ ಮದ್ಯದಲ್ಲಿರುವ ದೇವಸ್ಥಾನಕ್ಕೆ ಭಕ್ತರು ಜೀವ ಭಯದಲ್ಲಿ ಹೋಗು ವಂತ ಸ್ಥಿತಿ ಎದುರಾಗಿದೆ. ದೇವಸ್ಥಾನ ಹಾಗೂ ಸ್ಮಶಾನದ ಸುತ್ತಲೂ ಕನಿಷ್ಟ 200 ಮೀಟರ್‌ ಗಣಿಗಾರಿಕೆ ಮಾಡುವಂತ್ತಿಲ್ಲ ಎಂದು ಅಧಿಕಾರಿಗಳು ಹಲವು ಬಾರಿ ಹೇಳಿದ್ದಾರೆ. ಆದರೆ ಇದನ್ನು ಉಲ್ಲಂ ಸಿ ಗಣಿಗಾರಿಕೆ ಮಾಡಿರುವವರ ಮೇಲೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಗೋಮಾಳದಲ್ಲಿ ಹಲವು ತಲೆಮಾರಿನಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ಗ್ರಾಮದ ಕೆಲ ಮಂದಿ ಜಮೀನನ್ನು ಪ್ರಭಾವ ಬಳಸಿ ಜಮೀನಿನಲ್ಲಿ ಕ್ವಾರಿ ಮಾಡಿರುವ ಕುರುಹುಗಳಿವೆ. ಈ ಹಿಂದೆ ಸ್ಮಶಾನದ ಜಾಗ ಸರ್ವೆ ನಡೆಸಿದ ಬಳಿಕ ಹದ್ದುಬಸ್ತು ಮಾಡಿತ್ತು. ಗಣಿಗಾರಿಕೆ ಸಲುವಾಗಿ ಕೆಲ ಲೀಸ್‌ದಾರರು ಸ್ಮಶಾನದ ಗಡಿಯೊಳಗೆ ಮಣ್ಣು ಹಾಕುವ ಮೂಲಕ ಸ್ಮಶಾನ ಕಾಣದಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇದನ್ನೂ ಓದಿ : ಬಗರ್‌ಹುಕುಂ ಹಕ್ಕುಪತ್ರ ನೀಡಲು ಆಗ್ರಹ

ಹಿರೀಕಾಟಿ ಗೋಮಾಳದಲ್ಲಿ ಹತ್ತು ಎಕರೆ ಲೀಸ್‌ ಪಡೆದು 80 ಎಕರೆಗಿಂತಲೂ ಅಧಿಕ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದೆ. ಹಲವು ಕಡೆ ಕಾನೂನು ಬಾಹೀರವಾಗಿ
ಕಲ್ಲು ದೋಚಿದ್ದರೂ ಕೂಡ ಅಧಿಕಾರಿ ಗಳು ಚಕಾರ ಎತ್ತುತ್ತಿಲ್ಲ. ಆದ್ದರಿಂದ ಸಾರ್ವಜನಿಕರಿಗೆ ಅಕ್ರಮ ವಿಷಯ ತಿಳಿಯುವಂತೆ ಜಿಲ್ಲಾಧಿಕಾರಿಗಳು ಬಹಿರಂಗ ಆದೇಶ ಹೊರಡಿಸಲಿ.
– ಕಂದೇಗಾಲ ಶಿವಣ್ಣ, ಅಧ್ಯಕ್ಷರು, ರೈತ ಕೂಲಿ ಸಂಗ್ರಾಮ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next