Advertisement

ಗೋವಾ ಚಿತ್ರೋತ್ಸವ :ಐವತ್ತು ವರ್ಷಗಳ ಸಿನಿಮಾ ಕನ್ನಡದ ಉಯ್ಯಾಲೆ ಪ್ರದರ್ಶನಕ್ಕೆ ಅವಕಾಶ

12:55 PM Nov 25, 2019 | Nagendra Trasi |

ಪಣಜಿ, ನ. 18:ಸುವರ್ಣ ಸಂಭ್ರಮದಲ್ಲಿರುವ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ [ಇಫಿ] ನಲ್ಲಿ ಈ ಬಾರಿಯ ಮತ್ತೊಂದು ವಿಶೇಷವೆಂದರೆ ಐವತ್ತು ವರ್ಷಗಳ ಹಿಂದೆ ಅಂದರೆ 1969ರಲ್ಲಿ ಬಿಡುಗಡೆಯಾದ ಭಾರತೀಯ ಭಾಷೆಯ ಪ್ರಮುಖ ಚಿತ್ರಗಳ ಸಣ್ಣದೊಂದು ಅವಲೋಕನ.

Advertisement

ಇದರ ಭಾಗವಾಗಿ ಒಂಬತ್ತು ದಿನಗಳ ಉತ್ಸವದಲ್ಲಿ ಹನ್ನೊಂದು ಪ್ರಶಸ್ತಿ ಪುರಸ್ಕೃತ ಭಾರತೀಯ ಭಾಷೆಗಳ ಚಲನ ಚಿತ್ರಗಳು ಪ್ರದರ್ಶನವಾಗಲಿವೆ. ಇದು ಇನ್ನೊಂದು ಬಗೆಯಲ್ಲಿ ಭಾರತೀಯ ಭಾಷಾ ಚಿತ್ರರಂಗದ ಹೊಸಅಲೆಯನ್ನು ಗುರುತಿಸುವ ಪ್ರಯತ್ನವೂ ಹೌದು.

ಈ ಗೌರವ ಸಿಕ್ಕಿರುವುದು ಎನ್‌. ಲಕ್ಷ್ಮೀನಾರಾಯಣರ ಉಯ್ಯಾಲೆ ಚಿತ್ರಕ್ಕೆ. ಉಳಿದಂತೆ ಒಡಿಯಾ, ಬಂಗಾಳಿ, ತಮಿಳು, ತೆಲುಗು, ಮರಾಠಿ, ಹಿಂದಿ, ಅಸ್ಸಾಮಿ ಹಾಗೂ ಮಲಯಾಳಂ ಭಾಷೆಯ ಚಲನಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ.

ಚಿತ್ರಗಳ ವಿವರ:

ಎನ್‌ ಟಿರಾಮರಾವ್‌ ಅವರ ವರಕ್ತಂ, ಬ್ರಜೇನ್‌ ಬರುವಾ ಅವರ ಡಾ. ಬೇಜ್‌ ಬರುವಾ, ಸತ್ಯಜಿತ್‌ ರೇ ಅವರ ಅರಗೂಪಿ ಗೈನೆ ಬಾಘಾಬೖನೆ, ಕೆ. ಬಾಲಚಂದರ್ ನಿರ್ದೇಶನದ ಕೋಡುಗಲ್‌, ರಾಮ್‌ ಮಹೇಶ್ವರಿಯವರ ನಾನಕ್‌ ನಾಮ್‌ ಜಹಾಜ್‌ ಹೈ, ಹೃಷಿಕೇಶ್‌ ಮುಖರ್ಜಿಯವರ ಸತ್ಯಕಮ್‌, ಸಿದ್ಧಾರ್ಥರ ಸ್ತ್ರೀ, ಬಲ್ಜಿಪೆಂಡರಕರ್‌ ರ ತಂಬ್ದಿ, ಶಕ್ತಿಸಮಂತಾ ರ ಆರಾಧನಾ ಹಾಗೂ ಕೆ.ಎಸ್‌. ಸೇತು ಮಾಧವನ್‌ ಆವರ ಆದಿಮಕಲ್‌ ಸೇರಿವೆ.

Advertisement

ಉಯ್ಯಾಲೆ ಚಿತ್ರದ ಕುರಿತು:

ಈ ಚಿತ್ರತೆರೆ ಕಂಡದ್ದು 1969 ರಲ್ಲಿ. ಡಾ.ರಾಜ್‌ಕುಮಾರ್‌ ಮತ್ತು ಕಲ್ಪನಾ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದರು. ಕನ್ನಡದ ಖ್ಯಾತ ಕಾದಂಬರಿಕಾರ ಚದುರಂಗ ಅವರ ಕಾದಂಬರಿಯನ್ನು ಆಧರಿಸಿ ರೂಪಿಸಿದ ಸಿನಿಮಾ.

ಚದುರಂಗರು ಬರೀ ಸಿನಿಮಾಕಥೆ ಕೊಟ್ಟಿರಲಿಲ್ಲ, ಜತೆಗೆ ಸಂಭಾಷಣೆಯನ್ನೂಬರೆದಿದ್ದರು. ಇದಕ್ಕೆ ಸಂಗೀತ ಒದಗಿಸಿದವರು ವಿಜಯಭಾಸ್ಕರ್‌. ಗೋಪಾಲ್‌ ಮತ್ತು ಲಕ್ಷ್ಮಣ್‌ ಈ ಚಿತ್ರದ ನಿರ್ಮಾಪಕರು.

ಎನ್‌. ಲಕ್ಷ್ಮೀನಾರಾಯಣ್‌ ಅವರು ತಮ್ಮ ನಾಂದಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಚಿತ್ರಗಳನ್ನು ಶುರು ಮಾಡಿದವರು. ಹಲವಾರು ಸಾಮಾಜಿಕ ಸಂಗತಿಗಳನ್ನು ಅತ್ಯಂತ ಸಮರ್ಪಕವಾಗಿ ಜನಪ್ರಿಯತೆಯ ನೆಲೆಯಲ್ಲೇ ಸಿನಿಮಾ ರೂಪಿಸಿ ಯಶಸ್ವಿಯಾದವರು.

Advertisement

Udayavani is now on Telegram. Click here to join our channel and stay updated with the latest news.

Next