Advertisement

ಹಿಂದೂಗಳ ರಕ್ಷಣೆ ನೀವು ಮಾಡುತ್ತೀರೋ, ನಾವೇ ಮಾಡಬೇಕಾ ? ಸರಕಾರಕ್ಕೆ ಸೂಲಿಬೆಲೆ ಪ್ರಶ್ನೆ

01:47 PM Feb 22, 2022 | Team Udayavani |

ಶಿವಮೊಗ್ಗ : ಹಿಂದೂಗಳ ರಕ್ಷಣೆ ನೀವೇ ಮಾಡುತ್ತೀರೋ ಅಥವಾ ನಾವೇ ಮಾಡಿಕೊಳ್ಳಬೇಕಾ ಎಂದು ಚಕ್ರವರ್ತಿ ಸೂಲಿಬೆಲೆ ಗೃಹ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ..

Advertisement

ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆ ಯಾವತ್ತೂ ಶಾಂತವಾಗಿಲ್ಲ ಇಲ್ಲಿ ಮುಸ್ಲಿಂ ಸಂಘಟನೆಗಳು ಸದಾ ಸಕ್ರಿಯವಾಗಿರುತ್ತವೆ, ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ ಇದನ್ನು ತಡೆಯುವಲ್ಲಿ ಸರ್ಕಾರ ಹಾಗೂ ಇಂಟಲಿಜೆನ್ಸ್ ವಿಫಲವಾಗಿದೆ ಸರಕಾರ ಜನರ ಕಣ್ಣು ಒರೆಸುವ ಕೆಲಸ ಮಾಡುತ್ತಿದೆ ಎಂದು ಸರಕಾರದ ವಿರುದ್ಧ ಕಿಡಿಕಾರಿದರು .

ಜಿಲ್ಲೆಯಲ್ಲಿ ಈ ಹಿಂದೆ ಇರುವ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತಾಕಬೇಕಿದೆ. ಹತ್ಯೆಗೆ ಸಂಬಂಧಿಸಿ ಮೂರು ಜನರ ಬಂಧನವಾಗಿದ್ದು, ಇದರ ಹಿಂದೆ ಇರುವವರ ಮಟ್ಟ ಹಾಕಬೇಕಿದೆ.

ಇದನ್ನೂ ಓದಿ: ಬೆಂಗಳೂರು: ಪತ್ನಿ ಮತ್ತು ಅತ್ತೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದು ಪೊಲೀಸರಿಗೆ ಶರಣಾದ!

ಜಿಲ್ಲೆಯಲ್ಲಿ ವಹಾಬೀಗಳ ಸಂಖ್ಯೆ ಹೆಚ್ಚಾಗುತ್ತಿದೆ, ಇದನ್ನು ಮಟ್ಟಹಾಕಬೇಕು ಎಂದರು.

Advertisement

ಇದು ಹೋಮ್ ಮಿನಿಸ್ಟರ್ ತವರು ಜಿಲ್ಲೆ, ಅವರಲ್ಲಿ ಕೇಳಿಕೊಳ್ಳುತ್ತೇನೆ, ಹಿಂದುಗಳ ರಕ್ಷಣೆ ನೀವೇ ಮಾಡುತ್ತೀರೋ, ನಾವೇ ಮಾಡಿಕೊಳ್ಳಬೇಕಾ ಹೇಳಿ..ಅಕ್ಬರ್, ಬಾಬರ್ ನ ಕಾಲಕ್ಕೆ ನಾವು ತೆರಳುತ್ತಿದ್ದೇವೋ ಎಂದುಕೊಂಡಿದ್ದೇವೋ ಗೊತ್ತಿಲ್ಲ ಎಂದು ಸರಕಾರದ ವಿರುದ್ಧ ಕೆಂಡಾಮಂಡರಾದರು.

Advertisement

Udayavani is now on Telegram. Click here to join our channel and stay updated with the latest news.

Next