Advertisement

ವಾಸ್ತವ್ಯ ಹೂಡಿದರೆ ಅಸ್ಪೃಶ್ಯತೆ ತೊಲಗದು

11:33 AM Dec 17, 2018 | |

ಹುಣಸೂರು: ಪರಸ್ಪರ ಪ್ರೀತಿ, ಸೋದರತ್ವ ಬೆಳೆಸಿಕೊಂಡರೆ ಮಾತ್ರ ಅಸ್ಪೃಶ್ಯತೆ ತೊಲಗಿಸಲು ಸಾಧ್ಯ ಎಂದು ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ, ಲೇಖಕ ಕೆ.ದೀಪಕ್‌ ತಿಳಿಸಿದರು. ತಾಲೂಕಿನ ಹನಗೋಡು ಗ್ರಾಮದಲ್ಲಿ ತಾಲೂಕು ಆಡಳಿತ ಶನಿವಾರ ಆಯೋಜಿ ಸಿದ್ದ ಅಸ್ಪೃಶ್ಯತೆ  ನಿವಾರಣೆ ಜಾಗೃತಿ ಕಮ್ಮಟದಲ್ಲಿ ಮಾತನಾಡಿದರು.

Advertisement

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಅಸ್ಪೃಶ್ಯತೆ ಜೀವಂತವಾಗಿದೆ. ಇದು ಜನರ  ಮನೋರೋಗವೇ ಹೊರೆತು ಬೇರೇನೂ ಅಲ್ಲ. ಈ ರೋಗಕ್ಕೆ ಸಂವಿ ಧಾನದ ಆಶಯ ಮತ್ತು ಅಂಬೇಡ್ಕರ್‌ ಚಿಂತನೆಯೇ ಮದ್ದು. ರಾಜಕಾರಣಿಗಳು ದಲಿತರ  ಮನೆಗಳಲ್ಲಿ ವಾಸ್ತವ್ಯ ಹೂಡಿದ ಮಾತ್ರಕ್ಕೆ ಅಸ್ಪೃಶ್ಯತೆ ತೊಲಗದು.

ಬದಲಿಗೆ ವೈಜ್ಞಾನಿಕ ಚಿಂತನೆ ಅಳವಡಿಸಿಕೊಂಡರೆ  ಮಾತ್ರ ಇದರ ನಿವಾರಣೆ ಸಾಧ್ಯ ಎಂದರು. ಸಮಾಜ ಕಲ್ಯಾಣಾಧಿಕಾರಿ ಮೋಹನ್‌ ಕುಮಾರ್‌ ಮಾತನಾಡಿ, ಅಸ್ಪೃಶ್ಯತೆ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಅಸ್ಪೃಶ್ಯತೆ ನಿವಾರಣೆ ಕಮ್ಮಟ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ  ಗಾವಡಗೆರೆ, ಬಿಳಿಕೆರೆ ಯಲ್ಲೂ ಕಾರ್ಯಕ್ರಮ ಆಯೋಜಿಸಲಾಗು ವುದು ಎಂದು ತಿಳಿಸಿದರು. 

ತಾಪಂ ಸದಸ್ಯೆ ರೂಪಾ ಮಾತನಾಡಿ, ಜನರಲ್ಲಿ ಅಸ್ಪೃಶ್ಯತೆ  ಮನೋಭಾವ ಬದಲಾಗಬೇಕು. ಮಾನವೀಯ ನೆಲೆಯಲ್ಲಿ ಯೋಚಿಸಬೇಕು ಎಂದು ಸಲಹೆ ನೀಡಿದರು. ದಲಿತ ಮುಖಂಡ ನಿಂಗರಾಜ್‌ ಮಲ್ಲಾಡಿ  ಮಾತನಾಡಿ, ಕೇವಲ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಿ, ಒಬ್ಬರ ಮೇಲೊಬ್ಬರು ಕೇಸು ಹಾಕಿಕೊಂಡು ಊರಿನಲ್ಲಿ ನೆಮ್ಮದಿ ಹಾಳು ಮಾಡಿ ಕೊಳ್ಳುವುದರ ಬದಲಿಗೆ ಪರಸ್ಪರ ಪ್ರೀತಿ, ಸ್ನೇಹದಿಂದ ಬಾಳ್ವೆ ನಡೆಸಬೇಕು ಎಂದು ಸಲಹೆ ನೀಡಿದರು. 

ವೇದಿಕೆಯಲ್ಲಿ ತಾಪಂ ಸದಸ್ಯ ಟಿ.ಆರ್‌. ಶ್ರೀನಿವಾಸ್‌, ಮಾಜಿ ಸದಸ್ಯ ಗಣಪತಿ, ದಲಿತ ಮುಖಂಡರಾದ ರತ್ನಪುರಿ ಪುಟ್ಟಸ್ವಾಮಿ, ಬಲ್ಲೇನಹಳ್ಳಿ ಕೆಂಪರಾಜು, ಸ್ವಾಮಿ, ಸೋಮಯ್ಯ, ರಾಜಪ್ಪ, ಎಎಸ್‌ಐ ಚಿನ್ನಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ರಾಜೇಶ್‌, ಮಲ್ಲಿಕಾರ್ಜುನ್‌ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next