Advertisement

Politics:ಪಾಕ್‌ ಜತೆಗೆ ಮಾತುಕತೆ ಆಗದಿದ್ದರೆ ಗಾಜಾ ಗತಿಯೇ ಕಾಶ್ಮೀರಕ್ಕೆ:ಫಾರೂಕ್‌ ಅಬ್ದುಲ್ಲಾ

12:45 AM Dec 27, 2023 | Team Udayavani |

ಶ್ರೀನಗರ: “ಪಾಕಿಸ್ಥಾನದ ಜತೆಗೆ ಮಾತುಕತೆ ನಡೆಯದಿದ್ದರೆ, ಗಾಜಾಗೆ ಆಗಿರುವ ಗತಿಯೇ ಜಮ್ಮು – ಕಾಶ್ಮೀರಕ್ಕೆ ಆಗಲಿದೆ’ ಎಂದು ನ್ಯಾಶ‌ನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ಅಬ್ದುಲ್ಲಾ ವಿವಾದಿತ ಹೇಳಿಕೆ ನೀಡಿದ್ದಾರೆ. ಶ್ರೀನಗರದಲ್ಲಿ ಮಾತನಾಡಿದ ಅವರು, “ಭಾರತವು ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸ ಬೇಕು. ಒಂದು ವೇಳೆ ಮಾತುಕತೆ ಮೂಲಕ ವಿವಾದಗಳು ಬಗೆಹರಿ ಯದಿದ್ದರೆ, ಗಾಜಾಗೆ ಆದ ಗತಿಯೇ ಕಾಶ್ಮೀರಿಗರಿಗೂ ಆಗಲಿದೆ’ ಎಂದು ಎಚ್ಚರಿಕೆ ನೀಡಿದರು.

Advertisement

ಈ ಹಿಂದೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು, “ನಾವು ಸ್ನೇಹಿತರನ್ನು ಬದಲಿಸ ಬಹುದು, ಆದರೆ ನೆರೆಹೊರೆಯವರನ್ನು ಅಲ್ಲ’ ಎಂದಿದ್ದರು. ಪ್ರಧಾನಿ ಮೋದಿ ಯುದ್ಧದ ಬದಲಾಗಿ ಮಾತು ಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದರು. ಬಿಜೆಪಿ ನಾಯಕಿ ಹೀನಾ ಶಫಿ ಭಟ್‌ ಈ ಹೇಳಿಕೆ ಖಂಡಿಸಿ “ಫಾರೂಕ್‌ ಅಬ್ದುಲ್ಲಾ ಅವರಿಗೆ ತಿಳಿದಿ ರಲಿ, ಈಗಿನ ಸರಕಾರ ಪಾಕ್‌ ಎದುರು ತಲೆಬಾಗಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next