Advertisement

ಖರೀದಿಯಲ್ಲಿ ಅವ್ಯವಹಾರ ನಡೆದಿದ್ದರೆ ಸೂಕ್ತ ದಾಖಲೆ ನೀಡಲಿ

06:59 AM Jul 05, 2020 | Lakshmi GovindaRaj |

ಹಾವೇರಿ: ಕೋವಿಡ್‌ 19 ಚಿಕಿತ್ಸೆಯ ಉಪಕರಣಗಳ ಖರೀದಿಯಲ್ಲಿ ಅವ್ಯವ ಹಾರ ನಡೆದಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ದಾಖಲೆ ನೀಡಲಿ. ಈ ಬಗ್ಗೆ ಯಾವ ತನಿಖೆಗೂ ಸಿದಟಛಿರಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ  ಬಸವರಾಜ ಹೇಳಿದರು. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವ್ಯವಹಾರದ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಯಾವುದಾದರೂ ದಾಖಲೆ, ಆಧಾರ ಇದ್ದರೆ ಅದನ್ನು ಎಲ್ಲರ ಮುಂದೆ ಇಡಲಿ. ಯಾವ ಕಂಪನಿಯಲ್ಲಿ ಏನಾಗಿದೆ  ಎಂದು ತಿಳಿಸಲಿ. ಅದನ್ನು ಬಿಟ್ಟು ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ.

Advertisement

ಸಿದ್ದರಾಮಯ್ಯ ದೊಡ್ಡ ನಾಯಕರು. ಇಂಥ ಸಂದರ್ಭದಲ್ಲಿ ಹೊರಗೆ ಎಲ್ಲಿಯಾದರೂ ಹೋಗಿದ್ದಾರಾ, ಯಾವ ಆಸ್ಪತ್ರೆಗಾದರೂ ಭೇಟಿ ನೀಡಿದ್ದಾರಾ, ಮನೆಯಲ್ಲಿಯೇ ಇದ್ದು ಆರೋಪ ಮಾಡುತ್ತಿದ್ದಾರೆ ಎಂದರು.  10 ಆಸ್ಪತ್ರೆ ಜವಾಬ್ದಾರಿ ಹೊರಲಿ: ವಿಪಕ್ಷದವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ವಿಪಕ್ಷದವರು ಹೀಗೆಲ್ಲ ಪ್ರಶ್ನಿಸುವ ಬದಲು ಹತ್ತು ಆಸ್ಪತ್ರೆಯ ಜವಾಬ್ದಾರಿ  ವಹಿಸಿಕೊಂಡು ಕೆಲಸ ಮಾಡಲಿ ಎಂದು ಸಚಿವ ಬೈರತಿ ಬಸವರಾಜ್‌ ಚಿತ್ರದುರ್ಗದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next