Advertisement

ಮತಾಂತರ ಆಗದಿದ್ದರೆ ಕೈಕಾಲು ಕತ್ತರಿಸುವ ಬೆದರಿಕೆ

08:10 AM Jul 23, 2017 | Team Udayavani |

ಕಲ್ಲಿಕೋಟೆ: 6 ತಿಂಗಳ ಒಳಗೆ ಇಸ್ಲಾಂಗೆ ಮತಾಂತರ ಹೊಂದದಿದ್ದರೆ, ನಿಮ್ಮ ಬಲಗೈ ಮತ್ತು ಎಡಗಾಲನ್ನು ಕತ್ತರಿ ಸುತ್ತೇವೆ’ ಎಂದು ಬೆದರಿಕೆ ಹಾಕಿರುವ ಪತ್ರವೊಂದು ಕೇರಳದ ಖ್ಯಾತ ಸಾಹಿತಿ ಕೆ.ಪಿ. ರಾಮನುಣ್ಣಿ ಅವರಿಗೆ ಬಂದಿದೆ.

Advertisement

ಇತ್ತೀಚೆಗಷ್ಟೇ ಪ್ರಾದೇಶಿಕ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದ ರಾಮನುಣ್ಣಿ, “ಧರ್ಮದ ಹೆಸರಿನಲ್ಲಿ ಕಿತ್ತಾಡುವುದನ್ನು ಹಿಂದೂ ಮತ್ತು ಮುಸ್ಲಿಮರು ನಿಲ್ಲಿಸಬೇಕು’ ಎಂದು ಬರೆದಿದ್ದರು. ಈ ಲೇಖನವನ್ನು ವಿರೋಧಿಸಿರುವ ಮೂಲಭೂತವಾದಿಗಳು, “ಹಿಂದೂ ಮತ್ತು ಮುಸ್ಲಿಮರನ್ನು ಒಂದೇ ತಕ್ಕಡಿಯಲ್ಲಿ ತೂಗಿದ್ದೀರ. ಇಂಥ ಲೇಖನಗಳು ಮುಗ್ಧ ಮುಸ್ಲಿಮರನ್ನು ದಾರಿ ತಪ್ಪಿಸುತ್ತವೆ’ ಎಂದೂ ಪತ್ರದಲ್ಲಿ ಬರೆದಿದ್ದಾರೆ. ಇತ್ತೀಚೆಗೆ, ತಮ್ಮ ಕೃತಿಯೊಂದರಲ್ಲಿ ರಾಮನುಣ್ಣಿ ಅವರು ಶ್ರೀಕೃಷ್ಣ ಮತ್ತು ಪ್ರವಾದಿಯವರನ್ನು ಉಲ್ಲೇಖೀಸಿದ್ದಕ್ಕೆ ಎರಡೂ ಧರ್ಮ ಮೂಲಭೂತವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಲೇಖಕನಿಗೆ ಬಂದಿರವ ಬೆದರಿಕೆ ಕುರಿತು ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕೊಲೆ ಬೆದರಿಕೆ ಹಾಕುವವರ ವಿರುದ್ಧ ಸರಕಾರ ಕಠಿನ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next