Advertisement

Madhya Pradesh ಕಾಂಗ್ರೆಸ್‌ ವರ್ತನೆ ಹೀಗೆ ಇದ್ದರೆ ಬೆಂಬಲ ನೀಡುವವರು ಯಾರು ?

12:48 AM Oct 21, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ ಮಾತು ತಪ್ಪಿರುವ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ ಗರಂ ಆಗಿದ್ದಾರೆ. ಕಾಂಗ್ರೆಸ್‌ ವರ್ತನೆ ಹೀಗೆಯೇ ಮುಂದುವರಿದರೆ ವಿಪಕ್ಷಗಳ ಒಕ್ಕೂಟ (ಇಂಡಿಯಾ)ದ ಜತೆಗೆ ಯಾರೂ ಜತೆಗೂಡು ವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿರುವ ಅವರು ಕಾಂಗ್ರೆಸ್‌ ಪಕ್ಷಕ್ಕೆ ನಾನು ಯಾವುದೇ ಸಲಹೆಗಳನ್ನು ಕೊಡಬಯಸುವುದಿಲ್ಲ! ಆದರೆ ದೇಶದ ಮುಂದೆ ಬಹುದೊಡ್ಡ ಸವಾಲಿದೆ. ಒಕ್ಕೂಟದಲ್ಲಿ ಯಾವುದೇ ಪಕ್ಷಗಳ ಒಳಗೂ ಗೊಂದಲವಿರಬಾರದು. ನೀವು -ನಿಮ್ಮೊಳಗೆ ಗೊಂದಲದಿಂದ ಕಿತ್ತಾಡುತ್ತಿದ್ದರೆ. ನೀವು ಯಾವ ಚುನಾವಣೆಯನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸಮಾಜವಾದಿ ಪಕ್ಷಕ್ಕೆ ಯಾವುದೇ ಸೀಟು ಹಂಚಿಕೆ ಮಾಡದೇ ಇರುವುದನ್ನು ಗಂಭೀರವಾಗಿ ಪರಿಗ ಣಿಸಿರುವ ಅಖಿಲೇಶ್ ಕಾಂಗ್ರೆಸ್‌ನ ಈ ವರ್ತನೆಗೆ ಪ್ರತಿಯಾಗಿ ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷವೂ ಇದೇ ನೀತಿ ಅನುಸರಿಸಲಿದೆ ಎಂದಿದ್ದಾರೆ. ಜತೆಗೆ ಕಾಂಗ್ರೆಸ್‌ ಹೀಗೆ ನಡೆದುಕೊಳ್ಳುತ್ತಿದ್ದರೆ ಅವರೊಟ್ಟಿಗೆ ನಿಲ್ಲುವವರಾರು ? ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next