Advertisement

ಜೈಲಧಿಕಾರಿ 2 ತಿಂಗಳಲ್ಲಿ ದತ್‌ ನಡತೆ ಹೇಗೆ ನಿರ್ಧರಿಸಿದರು?

08:40 AM Jul 28, 2017 | Karthik A |

ಮುಂಬಯಿ:1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ನಟ ಸಂಜಯ ದತ್‌ರ ನಡತೆ ಬಗ್ಗೆ ಎರಡು ತಿಂಗಳಲ್ಲಿ ಕಾರಾಗೃಹ ಅಧಿಕಾರಿಗಳು ಹೇಗೆ ನಿರ್ಧರಿಸಲು ಸಾಧ್ಯ ಎಂದು ಬಾಂಬೆ ಹೈಕೋರ್ಟ್‌ ಪ್ರಶ್ನಿಸಿದೆ. ಇದರ ಜತೆಗೆ ಶರಣಾಗತರಾದ 2 ತಿಂಗಳಲ್ಲಿ ಪದೇ ಪದೆ ಅವರಿಗೆ ಪರೋಲ್‌ ಹೇಗೆ ಸಿಕ್ಕಿತು ಎಂದು ಮಹಾರಾಷ್ಟ್ರ ಸರಕಾರವನ್ನು ಹೈಕೋರ್ಟ್‌ ಕೇಳಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಸರಕಾರದ ಪರ ವಕೀಲರು ನಿಯಮ ಉಲ್ಲಂಘನೆಯಾಗಿದ್ದಲ್ಲಿ ದತ್‌ರನ್ನು ಮತ್ತೆ ಜೈಲಿಗೆ ಕಳುಹಿಸಲಿ ಎಂದು ಹೇಳಿದ್ದಾರೆ.

Advertisement

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ|ಆರ್‌.ಎಂ.ಸಾವಂತ್‌ ಮತ್ತು ನ್ಯಾ| ಸಾಧನಾ ಜಾಧವ್‌ ನೇತೃತ್ವದ ನ್ಯಾಯಪೀಠ, ‘ವಾಪಸ್‌ ಜೈಲಿಗೆ ಕಳಿಸುವ ಯಾವುದೇ ಉದ್ದೇಶ ನ್ಯಾಯಪೀಠಕ್ಕೆ ಇಲ್ಲ. ಆದರೆ, ಅವರನ್ನು ಮೊದಲೇ ಬಿಡುಗಡೆಗೊಳಿಸಿದ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆಯೇ?’ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದೆ. ಇದರೊಂದಿಗೆ ದತ್‌ ಯರವಾಡ ಜೈಲಿನಲ್ಲಿದ್ದಾಗ ಯಾವ ಆಧಾರದಲ್ಲಿ ಪೆರೋಲ್‌ ನೀಡುತ್ತಿದ್ದರು ಎಂದು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next