Advertisement
ಸಚಿವ ಸಂಪುಟ ಸಭೆಯ ಬಳಿಕ ಪಣಜಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಡೆಯಲು ಸರ್ಕಾರ ಶುಕ್ರವಾರ ಸಾರ್ವಜನಿಕ ವಿಚಾರಣೆ ನಡೆಸುತ್ತಿದೆ. ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಪಡೆಯಲಾಗುತ್ತಿದೆ. ಪಣಜಿಯ ಅಟಲ್ ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಓಡಾಟ ನಿಷೇಧಿಸಿದ್ದರೂ ಕೂಡ ಕೆಲವು ಪ್ರವಾಸಿಗರು ಖಾಸಗಿ ಸಂಖ್ಯೆಯ ದ್ವಿಚಕ್ರ ವಾಹನಗಳೊಂದಿಗೆ ಈ ಮಾರ್ಗವಾಗಿ ಓಡಾಡುತ್ತಿದ್ದಾರೆ. ಇದನ್ನು ಗಮನಿಸಿದ್ದೇವೆ. ಗೋವಾದ ಯಾರೂ ಕೂಡ ಅಟಲ್ ಸೇತುವೆಯ ಮೇಲೆ ಬೈಕ್ ಸವಾರಿ ನಡೆಸುವುದಿಲ್ಲ. ಇದರಿಂದ ಈ ವಾಹನಗಳನ್ನು ಪ್ರವಾಸಿಗರಿಗೆ ಅಕ್ರಮವಾಗಿ ಬಾಡಿಗೆಗೆ ನೀಡಿರುವುದು ಸ್ಪಷ್ಟವಾಗಿದೆ. ಸೇತುವೆ ಮೇಲೆ ಓಡಾಡುವ ಬೈಕ್ ಪತ್ತೆ ಹಚ್ಚಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
Advertisement
ರೆಂಟ್ ಎ ಬೈಕ್; ಪ್ರವಾಸಿಗರಿಗೆ ಖಾಸಗಿ ಬೈಕ್ ಅಕ್ರಮವಾಗಿ ಬಾಡಿಗೆಗೆ ನೀಡಿದರೆ ವಾಹನ ಜಪ್ತಿ
04:35 PM Oct 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.