Advertisement

ಗೌರವಯುತ ಸೀಟು ಕೊಡಿ ; ಮಾಯಾವತಿ

11:02 AM Sep 17, 2018 | |

ಲಕ್ನೋ: 2019ರ ಲೋಕಸಭೆ ಚುನಾವಣೆಯಲ್ಲಿ ನಮಗೆ ಗೌರವಯುತ ಸೀಟುಗಳನ್ನು ನೀಡದೇ ಇದ್ದರೆ, ಏಕಾಂಗಿಯಾಗಿ ಹೋಗಲು ಸಿದ್ಧ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ರವಿವಾರ ಹೇಳಿದ್ದಾರೆ. ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ನಮ್ಮ ಪಕ್ಷ ವಿರೋಧಿಸುವುದಿಲ್ಲ.
ಆದರೆ, ಗೌರವಯುತ ಸೀಟುಗಳು ಸಿಕ್ಕಿದರಷ್ಟೇ ಮೈತ್ರಿಕೂಟದ ಜತೆಗೆ ಹೋಗುತ್ತೇವೆ. ಇಲ್ಲದಿದ್ದರೆ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದಿದ್ದಾರೆ ಮಾಯಾವತಿ. ಈ ಹೇಳಿಕೆಗೆ ವ್ಯಂಗ್ಯಭರಿತ ತಿರುಗೇಟು ನೀಡಿರುವ ಬಿಜೆಪಿ, “ಮಾಯಾವತಿ ಅವರು ಗೌರವಯುತ ಸೀಟುಗಳನ್ನು ಯಾರಿಂದ ಕೇಳುತ್ತಿದ್ದಾರೆ? ಅವರು ಕೇಳುವಷ್ಟು ಸೀಟುಗಳನ್ನು ಕೊಟ್ಟರೆ ಯಾರೊಂದಿಗೆ ಬೇಕಿದ್ದರೂ ಹೋಗಲು ಬಿಎಸ್‌ಪಿ ಸಿದ್ಧವಿದೆಯೇ’ ಎಂದು ಪ್ರಶ್ನಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next