Advertisement

ಮೋದಿಗೆ ಅಧಿಕಾರ ಬೇಕಂದ್ರೆ ಸಾಯಲಿ ಬಿಡಿ: ಸಚಿವ ರಾಯರೆಡ್ಡಿ ವಿವಾದ!

06:27 PM Apr 21, 2017 | Team Udayavani |

ಕೊಪ್ಪಳ:ಪ್ರಧಾನಿ ನರೇಂದ್ರ ಮೋದಿ ಅವರು ಕಾರಿನ ಕೆಂಪು ದೀಪ ತೆಗೆದರಷ್ಟೇ ಸಾಕಾಗಲ್ಲ, ಅವರು ಭದ್ರತೆಯನ್ನೂ ತ್ಯಜಿಸಲಿ. ನನಗೂ ಭದ್ರತೆ ಬೇಡ ಎಂದು ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪ್ರಧಾನಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಪ್ರಧಾನಿಯವರು ಭದ್ರತೆಯನ್ನೂ ತ್ಯಜಿಸಲಿ ಎಂದು ಸಚಿವರು ಹೇಳಿದಾಗ, ಅವರಿಗೆ ಬೆದರಿಕೆ ಇದೆಯಲ್ಲ ಎಂದು ಸುದ್ದಿಗಾರರೊಬ್ಬರು ಪ್ರಶ್ನಿಸಿದಾಗ, ಅಧಿಕಾರ ಬೇಕೆಂದರೆ ಸಾಯಲಿ ಬಿಡಿ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮದ ವರದಿ ವಿವರಿಸಿದೆ.

ಕೊಪ್ಪಳಕ್ಕೆ ಶುಕ್ರವಾರ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವರಿಗೆ ಸುದ್ದಿಗಾರರು ಕೆಂಪು ಗೂಟದ ಕಾರಿಗೆ ಅಂತ್ಯ ಹಾಡಿರುವ ಕೇಂದ್ರದ ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆ ಅವರಿಗೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು, ‘ಯಾರು ಅಧಿಕಾರದಲ್ಲಿ ಇರಬೇಕು ಎಂದು ಬಯಸುತ್ತಾರೋ, ಅವರು ಸಾಯಲು ಸಿದ್ದವಾಗಿರಬೇಕು,’ ಎಂದು ಹೇಳಿದ್ದರು.

ನಾನು ಇದನ್ನು ಹೇಳಿದ್ದು ಮೋದಿಗಲ್ಲ, ಪರಿಸ್ಥಿತಿ ಆ ರೀತಿ ಇದೆ ಎಂದು ಹೇಳಿರುವುದಾಗಿ ಹೇಳಿ ರಾಯರೆಡ್ಡಿ ಅವರು ಸಮಜಾಯಿಷಿ ಎಂಬಂತೆ ಅಲ್ಲಿಂದ ಹೊರಟು ಹೋಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next