Advertisement

ಮೋದಿ ಅಲೆಯ ಜತೆ ತೇಲಿ ಸಾಗದಿದ್ದರೆ ಮೆಹಬೂಬ ಮುಳುಗುವುದು ನಿಶ್ಚಿತ: ಗಂಭೀರ್‌

10:06 AM Apr 12, 2019 | Team Udayavani |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ‘ಮೆಹಬೂಬ ಮುಫ್ತಿ ಅವರು ನನ್ನನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಬ್ಲಾಕ್‌ ಮಾಡಿರಬಹುದು; ಆದರೆ ದೇಶದ 130 ಕೋಟಿ ಜನರನ್ನು ಬ್ಲಾಕ್‌ ಮಾಡಲು ಆಕೆಗೆ ಸಾಧ್ಯವೇ ?’ ಎಂದು ಮಾಜಿ ಕ್ರಿಕೆಟಿಗ, ಹಾಲಿ ಬಿಜೆಪಿ ನಾಯಕ, ಗೌತಮ್‌ ಗಂಭೀರ್‌ ಪ್ರಶ್ನಿಸಿದ್ದಾರೆ.

Advertisement

2014ರಲ್ಲಿ ದೇಶದಲ್ಲಿ ಒಂದು ಅಲೆ ಇತ್ತು; 2019ರಲ್ಲಿ ಈಗ ಸುನಾಮಿ ಇದೆ. ಇದರ ಜತೆಗೆ ತೇಲುತ್ತಾ ಸಾಗದಿದ್ದರೆ ಮೆಹಬೂಬ ಮುಫ್ತಿ ಮುಳುಗುವುದು ನಿಶ್ಚಿತ ಎಂದು ಗಂಭೀರ್‌ ಟಾಂಗ್‌ ನೀಡಿದ್ದಾರೆ.

ಬಿಜೆಪಿ ಈ ಬಾರಿಯ ತನ್ನ ಚುನಾವಣಾ ಪ್ರಣಾಳಿಕೆ ಸಂಕಲ್ಪ ಪತ್ರದಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿಯನ್ನು ಮತ್ತು 35ಎ ವಿಧಿಯನ್ನು ಘೋಷಿಸಿರುವುದಕ್ಕೆ ಮೆಹಬೂಬ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next