Advertisement

RCB ವಿರುದ್ಧ ನಾನು ಆಡಿದ್ದರೆ…: ಬಿಸಿಸಿಐ ನಿರ್ಧಾರದ ವಿರುದ್ಧ ಪಂತ್ ಅಸಮಾಧಾನ

12:24 PM May 15, 2024 | Team Udayavani |

ಹೊಸದಿಲ್ಲಿ: ಒಂದು ಪಂದ್ಯದ ಅಮಾನತು ಐಪಿಎಲ್ ಪ್ಲೇಆಫ್‌ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಸ್ಥಾನವನ್ನು ಕಳೆದುಕೊಳ್ಳಲು ಕಾರಣವಾಗಬಹುದು ಎಂದು ಪರಿಗಣಿಸುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಮಂಗಳವಾರ ಲಕ್ನೋ ವಿರುದ್ಧ ಡೆಲ್ಲಿ 19 ರನ್ ಗಳ ಜಯ ಸಾಧಿಸಿದ ಬಳಿಕ ನೋವಿನ ನುಡಿಗಳನ್ನಾಗಿದ ಪಂತ್ ‘ ಆರ್ ಸಿಬಿ ವಿರುದ್ದದ ನಾನು ಮೈದಾನದಲ್ಲಿದ್ದರೆ ನಿರ್ಣಾಯಕ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದ್ದೆವು’ ಎಂದು ಹೇಳಿದ್ದಾರೆ.

ಸ್ಲೋ ಓವರ್ ರೇಟ್ ಕಾರಣಕ್ಕಾಗಿ ಪಂತ್ ಅವರು ಒಂದು ಪಂದ್ಯದಿಂದ ಅಮಾನತುಗೊಂಡ ಕಾರಣ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಿಂದ ಹೊರಗುಳಿಯಬೇಕಾಯಿತು. ಪಂದ್ಯದಲ್ಲಿ ಆರ್ ಸಿಬಿ 47 ರನ್ ಜಯ ಸಾಧಿಸಿತ್ತು. ಇದು ಡೆಲ್ಲಿ ಪ್ಲೇ ಆಫ್ ಸಾಧ್ಯತೆಗೆ ದೊಡ್ಡ ಹೊಡೆತ ನೀಡಿತ್ತು. ಡೆಲ್ಲಿ ಎಲ್ಲ ಪಂದ್ಯಗಳನ್ನು ಮುಗಿಸಿದರೂ 14 ಅಂಕ ಹೊಂದಿದ್ದು ಇನ್ನೂ ಅಧಿಕೃತವಾಗಿ ಹೊರ ಬಿದ್ದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next