Advertisement

Haryana: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಒಬಿಸಿ ಮೀಸಲು ನಷ್ಟ: ಸಚಿವ ಶಾ

11:40 PM Jul 16, 2024 | Team Udayavani |

ಚಂಡೀಗಢ: ಹಿಂದುಳಿದ ವರ್ಗಗಳ ವಿರೋಧಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಿತ್ತು. ಹರಿಯಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಲ್ಲೂ ಅದೇ ಪರಿಸ್ಥಿತಿ ಬರಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

“ಒಬಿಸಿಗೆ ಮೀಸಲು ನೀಡಲು 1950 ರಲ್ಲಿ ಕಾಳೇಲ್ಕರ್‌ ಆಯೋಗ ರಚಿಸಲಾಯಿತು. ಆದರೆ ಅದರ ಶಿಫಾರಸುಗಳನ್ನು ಕಾಂಗ್ರೆಸ್‌ ವರ್ಷಗಳ ಕಾಲ ಜಾರಿ ಮಾಡಲೇ ಇಲ್ಲ. 1980ರಲ್ಲಿ ಇಂದಿರಾ ಗಾಂಧಿ ಮಂಡಲ್‌ ಆಯೋಗವನ್ನು ಬದಿಗಿರಿಸಿದರು. 1990ರಲ್ಲಿ ಅದನ್ನು ಅನುಮತಿಸಿದಾಗ ರಾಜೀವ್‌ ಗಾಂಧಿ ಒಬಿಸಿ ಮೀಸಲು ವಿರೋಧಿಸಿದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next