Advertisement

ಬಾಕಿ ಕೊಡದಿದ್ದರೆ ಜಿಎಸ್‌ಟಿ ಪಾವತಿ ಸ್ಥಗಿತ!: ಮಮತಾ ಬ್ಯಾನರ್ಜಿ

06:57 PM Nov 15, 2022 | Team Udayavani |

ಕೋಲ್ಕತ್ತಾ:”ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೊಡಲು ಬಾಕಿಯಿರುವ ಮೊತ್ತವನ್ನು ಪಾವತಿಸದೇ ಇದ್ದರೆ, ನಾವು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪಾವತಿಸುವುದನ್ನೇ ನಿಲ್ಲಿಸಬೇಕಾಗುತ್ತದೆ.’

Advertisement

ಇಂದು ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಕಿರುವ ಸವಾಲು. ಮಂಗಳವಾರ ಬುಡಕಟ್ಟು ಬಾಹುಳ್ಯದ ಜಾರ್‌ಗ್ರಾಮ್‌ ಜಿಲ್ಲೆಯಲ್ಲಿ ನಡೆದ ರ್‍ಯಾಲಿ ವೇಳೆ ಮಾತನಾಡಿದ ಸಿಎಂ ಮಮತಾ, “ಕೇಂದ್ರ ಸರ್ಕಾರ ಒಂದೋ ಬಾಕಿ ಪಾವತಿಸಲಿ ಅಥವಾ ಅಧಿಕಾರದಿಂದ ಕೆಳಗಿಳಿಯಲಿ’ ಎಂದೂ ಗುಡುಗಿದ್ದಾರೆ.

ನಮ್ಮ ಬಾಕಿಯನ್ನು ಕೇಳಲು ನಾವೇನು ಕೇಂದ್ರದ ಮುಂದೆ ಭಿಕ್ಷೆ ಬೇಡುತ್ತಾ ಕೂರಬೇಕೇ? ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನೂ ಕೇಂದ್ರ ಬಿಡುಗಡೆ ಮಾಡುತ್ತಿಲ್ಲ. ಇದರ ವಿರುದ್ಧ ನೀವೆಲ್ಲರೂ ಬೀದಿಗಿಳಿದು ಹೋರಾಡಬೇಕು ಎಂದೂ ಬುಡಕಟ್ಟು ಜನಾಂಗಗಳಿಗೆ ದೀದಿ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next