Advertisement

Suprem court: ಸಂದೇಶ್‌ ಖಾಲಿಯ ಭೂ ಮಾಫಿಯ ಬಗ್ಗೆ ಸಿಬಿಐ ತನಿಖೆ: ಹೈಕೋರ್ಟ್

03:03 PM Apr 10, 2024 | Team Udayavani |

ಕೋಲ್ಕತಾ: ಲೋಕಸಭಾ ಚುನಾವಣೆಗೂ ಮುನ್ನ ಬಂಗಾಳದ ಸಂದೇಶ್‌ ಖಾಲಿಯ ಸುಲಿಗೆ, ಭೂ ಮಾಫಿಯಾ ಮತ್ತು ಲೈಂಗಿಕ ದೌರ್ಜನ್ಯ ಆರೋಪದ ಕುರಿತು ಸಿಬಿಐ ತನಿಖೆ ನಡೆಸಲಿದೆ ಎಂದು ಕೋಲ್ಕತಾ ಹೈಕೋರ್ಟ್‌ ಬುಧವಾರ (ಏ.01) ತಿಳಿಸಿದೆ.

Advertisement

ಇದನ್ನೂ ಓದಿ:Baba Ramdev: ಪತಂಜಲಿ ಜಾಹೀರಾತು ವಿವಾದ-ಕೇಂದ್ರ & ರಾಮ್‌ ದೇವ್‌ ಗೆ ಸುಪ್ರೀಂ ತರಾಟೆ

ಜನವರಿ 5ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ನಡೆದ ದಾಳಿಯ ಬಗ್ಗೆಯೂ ತನಿಖೆಯಾಗಬೇಕು. ಈ ಬಗ್ಗೆ ನ್ಯಾಯಾಲಯ ಅದನ್ನು ನಿರ್ವವಹಿಸಲಿದೆ.  ಮುಖ್ಯ ನ್ಯಾಯಮೂರ್ತಿ ಟಿಎಸ್.ಶಿವಜ್ಞಾನಂ ನೇತೃತ್ವದ ಪೀಠ, ಬಂಗಾಳ ಸರಕಾರಕ್ಕೆ ಕಟು ವಾಗ್ದಂದನೆ ವಿಧಿಸಿತ್ತು.

ಸಂದೇಶ ಖಾಲಿಯಲ್ಲಿ ಜನವರಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಲು ಆಗಮಿಸಿದ್ದ ವೇಳೆ ಷಹಜಹಾನ್‌ ಬೆಂಬಲಿಗರು ದಾಳಿ ನಡೆಸಿದ್ದರು. ಘಟನೆಯಲ್ಲಿ ಹಲವು ಅಧಿಕಾರಿಗಳು ಗಾಯಗೊಂಡಿದ್ದರು. ಇದರ ಬಳಿಕ ಇ.ಡಿ. ಅಧಿಕಾರಿಗಳಿಗೂ, ಪಶ್ಚಿಮಬಂಗಾಳ ಸರ್ಕಾರದ ನಡುವೆ ಜಟಾಪಟಿ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next