Advertisement

Politics; 2029 ರಲ್ಲಿ ಆಪ್ ಭಾರತವನ್ನು ಬಿಜೆಪಿ ಮುಕ್ತ ಮಾಡಲಿದೆ: ಕೇಜ್ರಿವಾಲ್ ಪ್ರತಿಜ್ಞೆ

04:58 PM Feb 17, 2024 | Team Udayavani |

ಹೊಸದಿಲ್ಲಿ: ”2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲದಿದ್ದರೆ, 2029 ರಲ್ಲಿ ಆಮ್ ಆದ್ಮಿ ಪಕ್ಷವು ಭಾರತವನ್ನು ಬಿಜೆಪಿಯಿಂದ ಮುಕ್ತಗೊಳಿಸುತ್ತದೆ” ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಪ್ರತಿಜ್ಞೆ ಮಾಡಿದ್ದಾರೆ.

Advertisement

70 ಸದಸ್ಯ ಬಲದ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಸಾಬೀತು ಮತದಾನದ ವೇಳೆ ಆಮ್ ಆದ್ಮಿ ಪಕ್ಷದ 62 ಶಾಸಕರ ಪೈಕಿ 54 ಮಂದಿ ಹಾಜರಿದ್ದರು. ಪ್ರತಿಪಕ್ಷ ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ, ಅವರಲ್ಲಿ ಏಳು ಮಂದಿ ಪ್ರಸ್ತುತ ಅಮಾನತುಗೊಂಡಿದ್ದಾರೆ.

ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಿದ ಬಳಿಕ ಮಾತನಾಡಿದ ಕೇಜ್ರಿವಾಲ್, ”ಬಿಜೆಪಿಯು ನಮ್ಮ ಮೇಲೆ ದಾಳಿ ಮಾಡಿ ನಮ್ಮ ಮಂತ್ರಿಗಳನ್ನು ಬಂಧಿಸಿದ ರೀತಿ ದೇಶಾದ ಜನರಿಗೆ ತಿಳಿದಿದೆ. ಅವರು ಜನರನ್ನು ಮೂರ್ಖರು ಎಂದು ಭಾವಿಸುತ್ತಾರೆ, ಆದರೆ ಅವರು ಹಾಗಿಲ್ಲ.ಪ್ರಧಾನಿ ಮೋದಿಯವರು ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ತಿಕ್ಕಲು ಬಯಸುತ್ತಿದ್ದಾರೆಯೇ ಎಂದು ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ ಮಕ್ಕಳು ಕೂಡ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ನಮ್ಮ ಅನೇಕ ಮಂತ್ರಿಗಳನ್ನು ಬಂಧಿಸಿದ್ದಾರೆ, ನಮ್ಮ ನಂಬರ್ 2, ನಂಬರ್ 3 ಮತ್ತು ನಂಬರ್ 4 ಜೈಲಿನಲ್ಲಿದ್ದಾರೆ, ಶೀಘ್ರದಲ್ಲೇ ನಂಬರ್ 1 ಆಗಲಿದೆ ಎಂದು ಮಾತುಕತೆ ನಡೆಸಲಾಗುತ್ತಿದೆ. ಇಡೀ ರಾಷ್ಟ್ರದಲ್ಲಿ ಆಮ್ ಆದ್ಮಿ ಪಕ್ಷವು ಬಿಜೆಪಿಯ ದೊಡ್ಡ ಸವಾಲಾಗಿರುವ ಕಾರಣ ಇದು ನಡೆಯುತ್ತಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next