Advertisement

ನಕ್ಸಲರ ಅಟ್ಟಹಾಸ ; ಐಇಡಿ ಬ್ಲಾಸ್ಟ್‌ನಲ್ಲಿ 11 ಭದ್ರತಾ ಸಿಬಂದಿಗೆ ಗಾಯ

09:58 AM May 29, 2019 | Vishnu Das |

ರಾಂಚಿ : ಜಾರ್ಖಂಡ್‌ನ‌ಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಸರಾಯ್‌ಕೆಲ್ಲಾದ ಕುಛಾಯ್‌ ಪ್ರದೇಶದಲ್ಲಿ ನಕ್ಸಲರು ಇರಿಸಿದ್ದ ಐಇಡಿ ಸ್ಫೋಟಗೊಂಡು 11 ಮಂದಿ ಭದ್ರತಾ ಸಿಬಂದಿಗಳು ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗಿನ ಜಾವ 4.43 ರ ವೇಳೆಗೆ ನಡೆದಿದೆ.

Advertisement

ಗಾಯಗೊಂಡ ಭದ್ರತಾ ಸಿಬಂದಿಗಳ ಪೈಕಿ 8 ಮಂದಿ ವಿಶೇಷ ಕಾರ್ಯಾಚರಣೆ  209 ಕೋಬ್ರಾ ಪಡೆಯವರು,ಮೂರು ಮಂದಿ ಜಾರ್ಖಂಡ್‌ ಪೊಲೀಸರು ಎಂದು ತಿಳಿದು ಬಂದಿದೆ.

ಗಾಯಾಳು ಭದ್ರತಾ ಸಿಬಂದಿಗಳನ್ನು ರಾಂಚಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಎಲ್ಲಾ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next