Advertisement

ಐಕಾನಿಕ್‌ ವೀಕ್‌ ಸೆಲೆಬ್ರೇಷನ್‌: ನೇರ ಪ್ರಸಾರ ಮಣಿಪಾಲದಲ್ಲಿ

02:16 AM Jun 05, 2022 | Team Udayavani |

ಉಡುಪಿ: ಆಜಾದಿ ಕಾ ಅಮೃತ್‌ ಮಹೋತ್ಸವ ಐಕಾನಿಕ್‌ ವೀಕ್‌ ಸೆಲೆಬ್ರೇಷನ್‌ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರ ಉಡುಪಿ ಜಿಲ್ಲೆಯಲ್ಲಿ ನಡೆಯಲಿದ್ದು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಜಿಲ್ಲೆ ಉಡುಪಿಯಾಗಿದೆ.

Advertisement

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ಜೂ. 6ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನೆರವೇರಿಸಲಿದ್ದಾರೆ.

ಹಣಕಾಸು ಸಚಿವಾಲಯ ಮತ್ತು ಕಾರ್ಪೊರೆಟ್‌ ವ್ಯವಹಾರಗಳ ಸಚಿವಾಲಯದಿಂದ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಭಾರತದಾದ್ಯಂತ 75 ಜಿಲ್ಲೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಎಲ್ಲ ಬ್ಯಾಂಕ್‌ಗಳ ಗ್ರಾಹಕರು, ಬ್ಯಾಂಕ್‌ ಅಧಿಕಾರಿಗಳು, ಸಾರ್ವಜನಿಕ ವಿಮಾ ಕಂಪನಿಗಳ ಅಧಿಕಾರಿಗಳು ಮತ್ತು ಕೇಂದ್ರ ಸರಕಾರದ ಅಧಿಕಾರಿಗಳು ಭಾಗವಹಿಸುವರು. ಸುಮಾರು 500 ಸಾರ್ವಜನಿಕರು ಭಾಗವಹಿಸಲಿರುವ ನೇರ ಪ್ರಸಾರವನ್ನು ಮಣಿಪಾಲದ ಸಿಂಡಿಕೇಟ್‌ ಗೋಲ್ಡನ್‌ ಜುಬಿಲಿ ಹಾಲ್ ನಲ್ಲಿ ಜೂ. 6ರ ಬೆಳಗ್ಗೆ 9.30ಕ್ಕೆ ಆಯೋಜಿಸಲಾಗಿದೆ ಎಂದು ಲೀಡ್‌ ಬ್ಯಾಂಕ್‌ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next