Advertisement

ನಿಪಕ್ಕೆ ಬಾವಲಿಯೇ ಮೂಲ :ದೃಢಪಡಿಸಿದ ಸಂಶೋಧನಾ ಮಂಡಳಿ 

09:09 AM Jul 04, 2018 | Team Udayavani |

ನವದೆಹಲಿ: ಇತ್ತೀಚೆಗೆ ಕೇರಳದಲ್ಲಿ 17 ಮಂದಿಯನ್ನು ಬಲಿ ಪಡೆದುಕೊಂಡ ನಿಪ ವೈರಸ್‌ಗೆ ಹಣ್ಣು ತಿನ್ನುವಂಥ ಬಾವಲಿಗಳೇ ಮೂಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೃಢಪಡಿಸಿದೆ.

Advertisement

ಈ ಹಿಂದೆ ಕೇರಳದ ಎರಡು ಜಿಲ್ಲೆಗಳಿಂದ ಸಂಗ್ರಹಿಸಲಾಗಿದ್ದ ಮಾದರಿಗಳನ್ನು ಪರೀಕ್ಷಿಸಿದ್ದ ಕೇಂದ್ರ ವೈದ್ಯಕೀಯ ತಂಡವು, ವೈರಸ್‌ಗೆ ಬಾವಲಿ ಮೂಲವಲ್ಲ ಎಂದು ಹೇಳಿತ್ತು. ಆದರೆ, ನಂತರ ಹಣ್ಣು ತಿನ್ನುವ 55 ಬಾವಲಿಗಳ ಮಾದರಿಗಳನ್ನು ಕಳುಹಿಸಲಾಗಿತ್ತು. ಅದನ್ನು ಪರೀಕ್ಷಿಸಿದಾಗ ಫ‌ಲಿತಾಂಶ ಪಾಸಿಟಿವ್‌ ಎಂದು ಬಂದಿದ್ದು, ನಿಪ ವೈರಸ್‌ಗೆ ಈ ಬಾವಲಿಗಳೇ ಕಾರಣ ಎಂಬುದು ಸ್ಪಷ್ಟವಾಗಿದೆ ಎಂದು ಮಂಡಳಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next