Advertisement

ನಾಳೆಯಿಂದ ಐಸಿಸಿ ಸಭೆ: ಭಾರತ-ಪಾಕ್‌ ಪಂದ್ಯ ಚರ್ಚೆ?

12:30 AM Feb 26, 2019 | Team Udayavani |

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ದುಬೈನಲ್ಲಿ ಬುಧವಾರದಿಂದ ಸಭೆ ಸೇರಲಿದೆ.

Advertisement

ಈ ವೇಳೆ ಭಾರತ ಮುಂದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆಡದೆ ಇರುವ ನಿರ್ಧಾರ ಬಗ್ಗೆ ಹಾಗೂ ಭಯೋತ್ಪಾದನೆ ಪೋಷಿಸುವ ರಾಷ್ಟ್ರಗಳ ಜತೆಗೆ ಕ್ರಿಕೆಟ್‌ ಬೇಡ ಎಂದು ಐಸಿಸಿಗೆ ಬಿಸಿಸಿಐ ಬರೆದಿರುವ ಪತ್ರದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸಭೆಯಲ್ಲಿ ಆಡಳಿತಾಧಿಕಾರಿ ಮುಖ್ಯಸ್ಥ ವಿನೋದ್‌ ರಾಯ್‌ ಸೇರಿದಂತೆ ಬಿಸಿಸಿಐನ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಪುಲ್ವಾಮ ದಾಳಿಯಲ್ಲಿ ಭಾರತದ 40 ಸಿಆರ್‌ಪಿಎಫ್ ಯೋಧರು ಮೃತರಾಗಿದ್ದರು. ಬೆನ್ನಲ್ಲೇ ಭಾರತ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಪಾಕಿಸ್ತಾನ ವಿರುದ್ಧ ಆಡಬಾರದು ಎಂದು ಬಿಸಿಸಿಐನ ಕೆಲವು ಅಧಿಕಾರಿಗಳು ಒತ್ತಾಯಿಸಿದ್ದರು. ಮಾತ್ರವಲ್ಲ ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರವನ್ನು ಕ್ರಿಕೆಟ್‌ ಕೂಟದಿಂದಲೇ ಹೊರಗಿಡಿ ಎಂದು ಐಸಿಸಿಗೆ ಪಾಕ್‌ ಹೆಸರೆತ್ತದೆಯೇ ಪರೋಕ್ಷವಾಗಿ ಬಿಸಿಸಿಐ ಮನವಿ ಮಾಡಿದೆ. 

ಈ ಕುರಿತಂತೆ ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡುಲ್ಕರ್‌, ಸುನಿಲ್‌ ಗಾವಸ್ಕರ್‌ ಪಾಕಿಸ್ತಾನದೊಂದಿಗಿನ ಕ್ರಿಕೆಟ್‌ ಆಡಬೇಕು, ನಾವು ಗೆಲ್ಲಬೇಕು. ಪಾಕ್‌ಗೆ ಸುಮ್ಮನೆ ಏಕೆ 2 ಅಂಕ ಬಿಟ್ಟುಕೊಡಬೇಕು. ಗೆದ್ದು ತೋರಿಸುವುದೇ ಉತ್ತಮ  ಎಂದಿದ್ದಾರೆ. ಆದರೆ ಗಂಭೀರ್‌, ಹರ್ಭಜನ್‌ ಸಿಂಗ್‌ ಸೇರಿದಂತೆ ಕೆಲ ಕ್ರಿಕೆಟಿಗರು ಪಾಕಿಗಳ ಜತೆಗೆ ಕ್ರಿಕೆಟ್‌ ಆಡುವುದನ್ನು ವಿರೋಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next