Advertisement

IAS, IPS ಅಧಿಕಾರಿಗಳು ಸರ್ಕಾರಕ್ಕಿಂತ ದೊಡ್ಡವರಲ್ಲ: ರಾಯರೆಡ್ಡಿ

05:34 PM Mar 17, 2018 | Team Udayavani |

ಕೊಪ್ಪಳ: ಐಎಎಸ್, ಐಪಿಎಸ್ ಅಧಿಕಾರಿಗಳೇನು ಮೇಲಿನಿಂದ ಇಳಿದು ಬಂದವರಾ? 9 ತಿಂಗಳಲ್ಲ, 9 ದಿನದಲ್ಲಿ ವರ್ಗಾವಣೆ ಮಾಡಿದರೂ ಹೋಗಬೇಕು…ಇದು ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ನೀಡಿದ ಪ್ರತಿಕ್ರಿಯೆ.

Advertisement

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ ಅವರನ್ನು 9 ತಿಂಗಳಲ್ಲಿ  ವರ್ಗಾವಣೆ ಮಾಡಿದ್ದೀರಲ್ಲ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ್ದರು.

ಕೊಪ್ಪಳಕ್ಕೆ ಸಚಿವ ರಾಯರೆಡ್ಡಿಯವರು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಅನೂಪ್ ಶೆಟ್ಟಿ, ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆ ಪ್ರಶ್ನಿಸಿದ್ದರು. ಐಎಎಸ್, ಐಪಿಎಸ್ ಅಧಿಕಾರಿಗಳು ಸರ್ಕಾರಕ್ಕಿಂತ ದೊಡ್ಡವರಲ್ಲ. ಸರ್ಕಾರ ಎಲ್ಲಿಗೆ ವರ್ಗಾಯಿಸುತ್ತೋ ಅಲ್ಲಿಗೆ ಹೋಗಬೇಕು. ಅವರನ್ನು ನೀವು (ಮಾಧ್ಯಮದವರು) ಹೀರೋ ಮಾಡುತ್ತಿದ್ದೀರಿ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next