Advertisement

ಶಶಿಕಲಾ ಕೋಣೆಯಲ್ಲಿ ಸಿಕ್ಕಿತು ಗುಟ್‌ಕಾ ಹಗರಣದ ರಹಸ್ಯ ಪತ್ರ

12:25 PM Jan 13, 2018 | Team Udayavani |

ಚೆನ್ನೈ: ದಿವಂಗತ ಜಯಲಲಿತಾ ಅವರ ಪೋಯಸ್‌ ಗಾರ್ಡನ್‌ ನಿವಾಸದಲ್ಲಿ ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ಅವರು ಹೊಂದಿದ್ದ ಕೋಣೆಯೊಂದರಲ್ಲಿ ತಮಿಳು ನಾಡಿನ ಗುಟ್‌ಕಾ ಹಗರಣದಲ್ಲಿ ಶಾಮೀಲಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದ ರಹಸ್ಯ ಪತ್ರವೊಂದು ತನಗೆ ಸಿಕ್ಕಿರುವುದಾಗಿ ಆದಾಯ ತೆರಿಗೆ ಇಲಾಖೆ ಹೈಕೋರ್ಟಿಗೆ ತಿಳಿಸಿದೆ.

Advertisement

ಗುಟ್‌ಕಾ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಡಿಎಂಕೆ ಶಾಸಕ ಜೆ  ಅನ್‌ಬಳಗನ್‌ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಪಟ್ಟಂತೆ ಚೆನ್ನೈನ ಆದಾಯ ತೆರಿಗೆ ಇಲಾಖೆಯ ಪ್ರಧಾನ ನಿರ್ದೇಶಕರಾದ ಸೂಸಿ ಬಾಬು ವರ್ಗೀಸ್‌ ಅವರು “ರಹಸ್ಯ ಪತ್ರ’ ತಮಗೆ ಸಿಕ್ಕಿದ ಮಾಹಿತಿಯನ್ನು ಅಫಿದಾವಿತ್‌ ಮೂಲಕ ಬಹಿರಂಗಪಡಿಸಿದರು. 

ಗುಟ್‌ಕಾ ಹಗರಣದಲ್ಲಿ ಓರ್ವ ರಾಜ್ಯ ಸಚಿವರು ಮತ್ತು ಕೇಂದ್ರ ಹಾಗೂ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಶಾಮೀಲಾಗಿರುವುದರಿಂದ ಸಿಬಿಐ ಮಾತ್ರವೇ ನಿಷ್ಪಕ್ಷಪಾತದ ತನಿಖೆ ನಡೆಸಬಲ್ಲುದು ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next