Advertisement

Hindus ಮಾತ್ರವಲ್ಲ, ಎಲ್ಲ ಧರ್ಮಗಳನ್ನೂ ಸೇರಿಸಿ ಹೇಳಿದ್ದೇನೆ : ಉದಯನಿಧಿ ಸ್ಟಾಲಿನ್

07:09 PM Sep 04, 2023 | Vishnudas Patil |

ತೂತುಕುಡಿ (ತಮಿಳುನಾಡು) : ಸನಾತನ ಧರ್ಮದ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ವೇಳೆಯಲ್ಲಿ ಸಚಿವ ಉದಯನಿಧಿ ಸ್ಟಾಲಿನ್ ಅವರು ನಾನು ಹೇಳಿಕೆಗೆ ಬದ್ಧನಾಗಿದ್ದು, ಹಿಂದೂಗಳು ಮಾತ್ರವಲ್ಲದೆ ಎಲ್ಲ ಧರ್ಮಗಳನ್ನೂ ಸೇರಿಸಿ ಹೇಳಿದ್ದೇನೆ” ಎಂದು ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ “ಮೊನ್ನೆ ನಾನು ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದೆ. ಏನು ಹೇಳಿದರೂ ಮತ್ತೆ ಮತ್ತೆ ಅದನ್ನೇ ಹೇಳುತ್ತೇನೆ.ಹಿಂದೂಗಳಷ್ಟೇ ಅಲ್ಲ ಧರ್ಮಗಳನ್ನೂ ಸೇರಿಸಿ ಹೇಳಿದ್ದೇನೆ. ಜಾತಿ ಭೇದಗಳನ್ನು ಖಂಡಿಸಿ ಮಾತನಾಡಿದ್ದೇನೆ ಅಷ್ಟೇ” ಎಂದಿದ್ದಾರೆ.

ಸನಾತನ ಧರ್ಮದ ಕುರಿತಾಗಿ ನೀಡಿದ ಹೇಳಿಕೆ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು,ಬಿಜೆಪಿ, ಹಿಂದೂ ಪರ ಸಂಘಟನೆಗಳು ಕಿಡಿ ಕಾರಿ ಕ್ಷಮೆ ಕೇಳಲು ಪಟ್ಟು ಹಿಡಿದಿವೆ.

ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿ, ಸನಾತನ ಧರ್ಮವನ್ನು ಕೇವಲ ವಿರೋಧಿಸುವುದಲ್ಲ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next