Advertisement

ನನಗೆ ಬಾಯ್‌ಫ್ರೆಂಡ್‌ ಇಲ್ಲ –ಘಟನೆಗೂ ನನಗೂ ಸಂಬಂಧವಿಲ್ಲ

05:41 AM Mar 19, 2019 | |

ನಟಿ ರಾಗಿಣಿಗಾಗಿ ರವಿ ಹಾಗೂ ಶಿವಪ್ರಕಾಶ್‌ ಎನ್ನುವವರು ಕಿತ್ತಾಡಿಕೊಂಡರಂತೆ ಎಂಬ ಸುದ್ದಿ ಕೆಲ ದಿನಗಳ ಹಿಂದೆಯಷ್ಟೇ ಜೋರಾಗಿ ಕೇಳಿಬಂದಿತ್ತು. ಜೊತೆಗೆ ರಾಗಿಣಿಯ ಬಾಯ್‌ಫ್ರೆಂಡ್‌ ಬಂದ ಗಲಾಟೆ ಮಾಡಿದನಂತೆ ಎಂಬೆಲ್ಲಾ ಸುದ್ದಿಗಳು ಓಡಾಡಿದವು. ಆದರೆ, ರಾಗಿಣಿ ಮಾತ್ರ ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಹಾಗಾದರೆ ಈ ಘಟನೆಗೂ ರಾಗಿಣಿಗೂ ಸಂಬಂಧವಿಲ್ಲವೇ ಎಂದು ನೀವು ಕೇಳಬಹುದು.

Advertisement

ರಾಗಿಣಿ ಮಾತ್ರ “ನನಗೂ ಆ ಘಟನೆಗೂ ಸಂಬಂಧವೇ ಇಲ್ಲ. ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ’ ಎನ್ನುತ್ತಿದ್ದಾರೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ರಾಗಿಣಿ, “ನನಗೆ ಯಾವ ಘಟನೆಯ ಬಗ್ಗೆಯೂ ಗೊತ್ತಿಲ್ಲ. ನಾನಿಲ್ಲಿ “ಗಾಂಧಿಗಿರಿ’ ಚಿತ್ರೀಕಣದಲ್ಲಿ ಬಿಝಿ ಇದ್ದೇನೆ. ಅದಕ್ಕಿಂತ ಹೆಚ್ಚಾಗಿ ನನಗೆ ಯಾವ ಬಾಯ್‌ಫ್ರೆಂಡ್‌ ಕೂಡಾ ಇಲ್ಲ.

ನಾನೊಬ್ಬಳೇ ಖುಷಿಯಾಗಿದ್ದೇನೆ’ ಎನ್ನುತ್ತಾರೆ. “ನಾನು ಆ ದಿನ ಊಟಕ್ಕೆ ಹೋಗಿದ್ದು ನಿಜ. ಆದರೆ, ನಾನು ಅವರಿಬ್ಬರ ಜೊತೆ ಹೋಗಿಲ್ಲ. ನನ್ನ ಮುಂಬೈ ಫ್ರೆಂಡ್ಸ್‌ ಬಂದಿದ್ದರು. ಅದೇ ರೆಸ್ಟೋರೆಂಟ್‌ನಲ್ಲಿ ಅವರಿಬ್ಬರು (ರವಿ-ಶಿವಪ್ರಕಾಶ್‌) ಇದ್ದರು. ಅವರ ಮಧ್ಯೆ ಏನೋ ವಾದ ನಡೆದು ಜಗಳವಾಗಿರಬೇಕು. ಹಾಗಂತ ಅದೇನು ಜಗಳವೆಂದು ನನಗೂ ಗೊತ್ತಿಲ್ಲ. ಅವರಿಬ್ಬರೂ ನನಗೆ ಪರಿಚಯ.

ಇಬ್ಬರು ಒಳ್ಳೆಯವರು. ಅವರ ನಡುವೆ ಏನಾಯಿತೆಂದು ನಿಜವಾಗಿಯೂ ನನಗೆ ಗೊತ್ತಿಲ್ಲ’ ಎನ್ನುವುದು ರಾಗಿಣಿ ಮಾತು. ಈ ಮೂಲಕ ತನಗೂ ಆ ಘಟನೆಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ರಾಗಿಣಿ.  ಸದ್ಯ ರಾಗಿಣಿ ಪ್ರೇಮ್‌ ನಾಯಕರಾಗಿರುವ “ಗಾಂಧಿಗಿರಿ’ ಚಿತ್ರೀಕರಣದಲ್ಲಿ ಬಿಝಿ. ಇದಲ್ಲದೇ ಎರಡು ನಾಯಕಿಪ್ರಧಾನ ಆ್ಯಕ್ಷನ್‌ ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ ರಾಗಿಣಿ. 

Advertisement

Udayavani is now on Telegram. Click here to join our channel and stay updated with the latest news.

Next