Advertisement

ನನ್ನ ಬೆಳವಣಿಗೆಗೆ ಬ್ರೇಕ್‌ ಹಾಕಲು ಸಾಧ್ಯವಿಲ್ಲ: ಹೆಬ್ಟಾಳಕರ

06:45 AM Oct 23, 2018 | Team Udayavani |

ಬಾಗಲಕೋಟೆ: ನನ್ನ ಬೆಳವಣಿಗೆಗೆ ಬ್ರೇಕ್‌ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ನನಗೆ ದೇವರ ಆಶೀರ್ವಾದ ಇದೆ. ನನ್ನ ಶ್ರಮ ಹಾಗೂ ಧರ್ಮ ನನ್ನನ್ನು ಕೈ ಹಿಡಿಯುತ್ತದೆ ಎಂದು  ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಾರಕಿಹೊಳಿ ಪದೇ ಪದೆ ನನ್ನ ಹೆಸರು ಬಳಕೆ ಮಾಡುವುದರ ಹಿಂದಿನ ಮರ್ಮ ತಿಳಿಯುತ್ತಿಲ್ಲ. ನನ್ನನ್ನು ಕಾಲ ಕಸ, ಶೋ ಪೀಸ್‌ ಹಾಗೂ ಸ್ಲಮ್‌ನಿಂದ ಬಂದೋಳು ಎಂದಿದ್ದಾರೆ. ಆದರೆ, ನನ್ನ ಪಾಡಿಗೆ ನಾನು ಇದ್ದೇನೆ. ಅವರು ನಮ್ಮ ಜಿಲ್ಲೆಯ ದೊಡ್ಡ ನಾಯಕರು, ದೊಡ್ಡವರು. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಸಹಾಯ ಮಾಡಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ. ಸಚಿವ ಡಿ.ಕೆ. ಶಿವಕುಮಾರ ಅವರಿಗೆ ನಾನೊಬ್ಬಳೆ ಬೆಂಬಲಿಗಳಲ್ಲ. ಅವರಿಗೆ ಸಾಕಷ್ಟು ಜನ ಬೆಂಬಲಿಗರಿದ್ದಾರೆ ಎಂದರು. 

ದೇಶದಲ್ಲಿ ಈಗ ಸದ್ಯ ನಡೆಯುತ್ತಿರುವ ಮೀ ಟೂ ಅಭಿಯಾನಕ್ಕೆ ಲಕ್ಷ್ಮೀ ಹೆಬ್ಟಾಳಕರ ಸಂತಸ ವ್ಯಕ್ತಪಡಿಸಿದರು. ದೇಶದ ಜನರು ಎಜ್ಯುಕೇಟ್‌ ಆಗುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next